ಕೊಳ್ತಿಗೆ ಗ್ರಾ.ಪಂ.ನಲ್ಲಿ ವಿಕಲಚೇತನರ ಗ್ರಾಮಸಭೆ

0

ಪುತ್ತೂರು: ಕೊಳ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ವಿಕಲಚೇತನರ ಗ್ರಾಮಸಭೆ ನಡೆಯಿತು. ಪುತ್ತೂರು ತಾಲೂಕು ಮಟ್ಟದ ವಿಕಲಚೇತನರ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ಯೋಜನೆಗಳ ಮಾಹಿತಿ ನೀಡಿದರು. ಕೊಳ್ತಿಗೆ ಪ್ರಾಥಮಿಕ ಅರೋಗ್ಯ ಕೇಂದ್ರದ ವ್ಯೆಧ್ಯಾದಿಕಾರಿ ಡಾ.ಅಮಿತ್ ಭಟ್ ಎಂಡೋ ಪೀಡಿತ ವ್ಯಕ್ತಿಗಳ ಪಿಂಚಣಿ ಹಾಗೂ ಅರೋಗ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಯಪ್ರಸಾದ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಳ್ತಿಗೆ ಅರೋಗ್ಯ ಕೇಂದ್ರ ವತಿಯಿಂದ ವಿಕಲಚೇತನರ ವ್ಯಕ್ತಿಗಳಿಗೆ ಹಾಗೂ ಎಂಡೋ ಪೀಡಿತರಿಗೆ ಅರೋಗ್ಯ ತಪಾಸಣೆ ನಡೆಯಿತು. ವಿಕಲಚೇತನರು, ವಿಕಲಚೇತನರ ಆರೈಕೆದಾರರು, ಆಶಾಕಾರ್ಯಕರ್ತರು, ಕೊಳ್ತಿಗೆ ಗ್ರಾಮೀಣಪುನರ್ವಸತಿ ಕಾರ್ಯಕರ್ತ ಕ್ಷರಿತ್ ರೈ, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here