ಹಿರಿಯರ ಕ್ರೀಡಾಕೂಟದಲ್ಲಿ ದಿನೇಶ್ ಆಚಾರ್ಯ ಶೆಟ್ಟಿಮಜಲು ರಾಷ್ಟ್ರಮಟ್ಟಕ್ಕೆ

0

ಪುತ್ತೂರು : ಜ.13 ಹಾಗೂ 14ರಂದು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ನಡೆದ 42ನೇ ರಾಜ್ಯ ಮಟ್ಟದ ಹಿರಿಯ ವಿಭಾಗದ ಓಟ ಹಾಗೂ ರಿಲೇಯಲ್ಲಿ ಪುತ್ತೂರು ತಾಲೂಕಿನ ನರಿಮೊಗರು ಶೆಟ್ಟಿ ಮಜಲು ನಿವಾಸಿ ದಿನೇಶ್ ಆಚಾರ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
40+ ವಯೋಮಿತಿಯ 400 ಮೀಟರ್ ಮತ್ತು 800 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನವನ್ನು ಹಾಗೂ 4×100 ಮೀಟರ್ ರಿಲೇ ಸ್ಪರ್ಧೆ ಯಲ್ಲೂ ತೃತೀಯ ಸ್ಥಾನವನ್ನು ಪಡೆದು ಫೆ.2ರಿಂದ 4ರ ತನಕ ತಮಿಳುನಾಡಿನ ತಿರುಮಲ್ವೇಲಿಯಂ ನಲ್ಲಿ ನಡೆಯಲಿರುವ 43ನೇ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ. ಇವರು ಶೆಟ್ಟಿ ಮಜಲು ದಿ.ನಾರಾಯಣ ಆಚಾರ್ಯ ಮತ್ತು ವಸಂತಿ ನಾರಾಯಣ ದಂಪತಿ ಪುತ್ರನಾಗಿರುವ ಇವರು , ಪ್ರಸ್ತುತ ಬೊಳುವಾರಿನ ಪ್ರಗತಿ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here