ಜ.30 ಬೆಂಗಳೂರಿನಲ್ಲಿ ರಾಜ್ಯ ಟೈಲರ್ಸ್ ಅಸೋಸಿಯೇಶನ್‌ ರಜತ ಮಹೋತ್ಸವ ಮತ್ತು ವೃತ್ತಿ ಬಾಂಧವರ ಬೃಹತ್ ಸಮಾವೇಶ-ಪುತ್ತೂರಿನಲ್ಲಿ ಪೂರ್ವಭಾವಿ ಸಭೆ

0

ಪುತ್ತೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ರಾಜ್ಯ ಟೈಲರ್‍ಸ್ ಅಸೋಸಿಯೇಶನ್‌ ರಜತ ಮಹೋತ್ಸವ ಮತ್ತು ಟೈಲರ್ ವೃತ್ತಿ ಬಾಂಧವರ ಬೃಹತ್ ಸಮಾವೇಶವು ಜ.30ರಂದು ನಡೆಯಲಿದ್ದು, ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿಯ ಪೂರ್ವಭಾವಿ ಸಭೆಯು ಪುತ್ತೂರಿನ ಶಾರದ ಭಜನಾ ಮಂದಿರದಲ್ಲಿ ನಡೆಯಿತು.

ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ.ಯು. ನಾೖಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುತ್ತೂರು ತಾಲೂಕು ಟೈಲರ್ ವೃತ್ತಿ ಮಾಡುವ ಎಲ್ಲರೂ ಜ.30 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್‍ಯಕ್ರಮದಲ್ಲಿ ಒಂದು ದಿನದ ಮಟ್ಟಿಗೆ ತಮ್ಮ ಟೈಲರ್ ಅಂಗಡಿಗೆ ರಜೆ ಘೋಷಿಸಿ ಭಾಗವಹಿಸುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕಾಗಿ ಸದಸ್ಯರಲ್ಲಿ ಮನವಿ ಮಾಡಿದರು. ಪುತ್ತೂರು ತಾಲೂಕಿನ 9 ವಲಯಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಕಾರ್‍ಯಕ್ರಮದಲ್ಲಿ ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿ, ಬೆಂಗಳೂರಿಗೆ ಬರುವ ಸದಸ್ಯರ ಸಂಖ್ಯೆಯನ್ನು ಮೊದಲೇ ತಿಳಿಸುವಂತೆ ವಿನಂತಿಸಿದರು.


ವೇದಿಕೆಯಲ್ಲಿ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ.ಯು. ನಾೖಕ್, ಪ್ರಧಾನ ಕಾರ್ಯದರ್ಶಿ ಚಿತ್ರಾ ಬಿ.ಸಿ, ರಾಜ್ಯ ಸಮಿತಿ ಆಂತರಿಕ ಲೆಕ್ಕ ಪರಿಶೋಧಕ ರಘುನಾಥ್ ಬಿ., ಪುತ್ತೂರು ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಹಾಗೂ ರಜತ ಮಹೋತ್ಸವ ಪ್ರಚಾರ ಸಮಿತಿ ಸದಸ್ಯ ಜಯಂತ ಉರ್ಲಾಂಡಿ, ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ನಿಡ್ಪಳ್ಳಿ, ಜಿಲ್ಲಾ ಸದಸ್ಯ ಶಂಬು ಬಲ್ಯಾಯ ಮುಂಡೋಡಿ, ಕ್ಷೇತ್ರ ಸಮಿತಿ ಕೋಶಾಧಿಕಾರಿ ಪರಮೇಶ್ವರ ಕಾಣಿಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಗರ ವಲಯ ಅಧ್ಯಕ್ಷ ದಿನೇಶ್ ಸಂಪ್ಯ, ಕಾರ್ಯದರ್ಶಿ ಆಶಾ ಕಲ್ಲಾರೆ , ಉಪಾಧ್ಯಕ್ಷ ಯಶೋಧರ ಜೈನ್ ದರ್ಬೆ, ನರಿಮೊಗರು ವಲಯ ಕಾರ್‍ಯದರ್ಶಿ ವಸಂತ ಗೌಡ ಪುರುಷರಕಟ್ಟೆ, ಕುಂಬ್ರ ವಲಯಾಧ್ಯಕ್ಷ ಲತೀಫ್, ಉಪ್ಪಿನಂಗಡಿ ವಲಯ ಅಧ್ಯಕ್ಷ ಕೃಷ್ಣನಾಯ್ಕ್, ಕಾರ್ಯದರ್ಶಿ ಕವಿತಾ ರೈ, ಜಯಂತ, ಪುಣಚ ವಲಯ ಅಧ್ಯಕ್ಷೆ ನಿರ್ಮಲ, ಕಾರ್ಯದರ್ಶಿ ಉದಯ ಎನ್., ಕುಂಬ್ರ ವಲಯ ಕಾರ್ಯದರ್ಶಿ ಪೂರ್ಣಿಮ ಭಟ್, ಈಶ್ವರಮಂಗಲ ವಲಯಾಧ್ಯಕ್ಷೆ ರೇವತಿ ಗಣೇಶ್, ಪಾಣಾಜೆ ವಲಯ ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ವಿದ್ಯಾ, ಸವಣೂರು ವಲಯ ಅಧ್ಯಕ್ಷೆ ಯಶೋಧ ಮೆದು, ಕಾರ್ಯದರ್ಶಿ ಶುಭಲಕ್ಷ್ಮಿ, ಕಾಣಿಯೂರು ವಲಯ ಪದಾಧಿಕಾರಿಗಳೂ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಂಬು ಬಲ್ಯಾಯ ಸ್ವಾಗತಿಸಿ, ನಗರ ವಲಯ ಜಯದೇವ್ ವಂದಿಸಿದರು.

LEAVE A REPLY

Please enter your comment!
Please enter your name here