ಕುಂಬ್ರ: ನಾಯಿ ಕಡಿದು ಇಬ್ಬರಿಗೆ ಗಾಯ – ಹುಚ್ಚು ನಾಯಿ ಕಡಿದಿರುವ ಶಂಕೆ

0

ಪುತ್ತೂರು: ನಾಯಿ ಕಚ್ಚಿ ಇಬ್ಬರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜ.18ರಂದು ಕುಂಬ್ರ ಸಮೀಪದ ಗಟ್ಟಮನೆ ಎಂಬಲ್ಲಿ ನಡೆದಿದೆ. ಕುಂಬ್ರದ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಅಬೂಬಕ್ಕರ್ ಇದ್ಪಾಡಿ ಎಂಬವರು ಅಂಗಡಿಗೆ ಹೋಗುತ್ತಿದ್ದ ವೇಳೆ ನಾಯಿಯೊಂದು ಅವರ ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಇದೇ ಪರಿಸರದ ಮಹಿಳೆಯೋರ್ವರಿಗೂ ಅದೇ ನಾಯಿ ಕಚ್ಚಿ ಗಾಯಗೊಳಿಸಿದ್ದು ಇಬ್ಬರನ್ನು ಕೂಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಹುಚ್ಚು ನಾಯಿ ಕಚ್ಚಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಗೆ ಹಾಗೂ ಶಾಲೆಗಳಿಗೆ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸಾರೆಪುಣಿ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here