ಜೆಸಿಐ ವಲಯ ತರಬೇತಿ ವಿಭಾಗದ ನಿರ್ದೇಶಕರಾಗಿ ಹೇಮಲತಾ ಪ್ರದೀಪ್ ಆಯ್ಕೆ

0

ಆಲಂಕಾರು: 2024ರ ಜೇಸಿಐ ವಲಯ 15ರ ತರಬೇತಿ ವಿಭಾಗದ ವಲಯ ನಿರ್ದೇಶಕರಾಗಿ ಆಲಂಕಾರು ಜೆಸಿಐ ಘಟಕದ ಪೂರ್ವಾಧ್ಯಕ್ಷರು ಹಾಗೂ ಪೂರ್ವ ವಲಯ ಉಪಾಧ್ಯಕ್ಷರೂ ಆಗಿರುವ ಹೇಮಲತಾ ಪ್ರದೀಪ್ ಅವರು ಆಯ್ಕೆಯಾಗಿದ್ದಾರೆ.
ಕಳೆದ 12 ವರ್ಷಗಳಿಂದ ಜೇಸಿಐ ಆಲಂಕಾರು ಘಟಕದ ಸಕ್ರಿಯ ಸದಸ್ಯರಾಗಿರುವ ಇವರು ೨೦೧೭ರಲ್ಲಿ ವಲಯ ತರಬೇತುದಾರರಾಗಿ ಆಯ್ಕೆಯಾಗಿದ್ದು ತದನಂತರ ಅವಧಿಯಲ್ಲಿ ಶಾಲಾ-ಕಾಲೇಜು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಜೀವನ ಕೌಶಲ-ವ್ಯಕ್ತಿತ್ವ ವಿಕಸನದಂತಹ ಹಲವಾರು ತರಬೇತಿಗಳನ್ನು ನೀಡಿರುತ್ತಾರೆ. ಇತ್ತೀಚೆಗೆ ಪಡುಬಿದ್ರಿಯಲ್ಲಿ ನಡೆದ ವಲಯದ ಪದಗ್ರಹಣ ಸಮಾರಂಭದಲ್ಲಿ ವಲಯ ನಿರ್ದೇಶಕರಾಗಿ ಹೇಮಲತಾ ಪ್ರದೀಪ್ ಅವರು ಪದಸ್ವೀಕಾರ ಮಾಡಿದರು. ಆಲಂಕಾರು ಬಾಕಿಲ ನಿವಾಸಿಯಾಗಿರುವ ಹೇಮಲತಾ ಅವರು ಪೆರಾಬೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ, ಜೇಸಿಐ ಪೂರ್ವ ವಲಯಾಧ್ಯಕ್ಷರಾದ ಪ್ರದೀಪ್ ಬಾಕಿಲ ಅವರ ಪತ್ನಿ.

LEAVE A REPLY

Please enter your comment!
Please enter your name here