ಕೆನರಾ ಕೈಗಾರಿಕಾ ಸಂಘದ ನಿರ್ದೇಶಕರಾಗಿ ಸುಂದರ ಗೌಡ ಬಳ್ಳಕ್ಕ

0

ಪುತ್ತೂರು: ಕೆನರಾ ಕೈಗಾರಿಕಾ ಸಂಘ ಬೈಕಂಪಾಡಿ ಇದರ ನಿರ್ದೇಶಕರುಗಳ ಚುನಾವಣೆ ಜ. 9 ರಂದು ನಡೆದಿದ್ದು, ನಿರ್ದೇಶಕರಾಗಿ ಬೈಕಂಪಾಡಿ ಎಸ್.ಜೆ.ಆರ್. ಟೆಕ್ನಾಲಜೀಸ್ ಮಾಲಕ ಸುಂದರ ಗೌಡ ಇವರು ಅತ್ಯಧಿಕ ಸಂಖ್ಯೆಯ ಮತಗಳಿಂದ ಗೆದ್ದು ಚುನಾಯಿತರಾಗಿದ್ದಾರೆ.

ಗುತ್ತಿಗಾರು ಸಮೀಪದ ಬಳ್ಳಕ್ಕದ ನಿವಾಸಿಯಾಗಿರುವ ಇವರು, ಕಾಣಿಯೂರಿನ ಅಬೀರ ಕುಟುಂಬದವರು. ದಿ. ಧರ್ಮಪಾಲ ಗೌಡ ಹಾಗೂ ದಿ. ರಾಮಕ್ಕ ದಂಪತಿಗಳ ಪುತ್ರ. ಸುಮಾರು 20 ವರ್ಷಗಳಿಂದ ಮಂಗಳೂರಿನಲ್ಲಿ ಎಸ್.ಜೆ.ಆರ್ ಟೆಕ್ನಾಲಜೀಸ್ ಎಂಬ ತನ್ನ ಮಾಲಿಕತ್ವದ ಸಂಸ್ಥೆಯನ್ನು ಮುನ್ನಡೆಸುತ್ತಾ ಮಂಗಳೂರಿನಲ್ಲಿ ನೆಲೆಸಿದ್ದಾರೆ.

LEAVE A REPLY

Please enter your comment!
Please enter your name here