ಕಡಬ ಸೈಂಟ್ ಜೋಕಿಮ್ಸ್ ಶಾಲೆಯ ಹಸ್ತಾ ಪಿ.ಎ, ವಿಘ್ನೇಶ್ ಹಾಗೂ ಸಾತ್ವಿಕ್ ಅವರಿಗೆ ರಾಜ್ಯ ಪುರಸ್ಕಾರ

0

ಕಡಬ: 2022-23ನೇ ಸಾಲಿನ ಭಾರತ್ ಸ್ಕೌಟ್ಸ್ ಗೈಡ್ ಬುಲ್ ಬುಲ್ ವಿಭಾಗದಲ್ಲಿ ಚತುರ್ಥ ಚರಣ್ ಕಬ್ ಮತ್ತು ಹೀರಖ್ ಗರಿ ಬುಲ್ ಬುಲ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ಕಡಬ ಸೈಂಟ್ ಜೋಕಿಮ್ಸ್ ಶಾಲೆಯ 5ನೇ ತರಗತಿಯ ಹಸ್ತಾ ಪಿ.ಎ. ಮತ್ತು ವಿಘ್ನೇಶ್ ಹಾಗೂ 3ನೇ ತರಗತಿಯ ಸಾತ್ವಿಕ್‌ರವರಿಗೆ ಲಭಿಸಿದೆ .

ಜ.19ರಂದು ಬೆಂಗಳೂರು ಗಾಜಿನಮನೆ,ರಾಜಭವನದಲ್ಲಿ ನಡೆದ 2022-23ನೇ ಸಾಲಿನ ಚತುರ್ಥ ಚರಣ ಕಬ್, ಹೀರಖ್ ಗರಿ ಬುಲ್ ಬುಲ್, ರಾಜ್ಯಪುರಸ್ಕಾರ ಸ್ಕೌಟ್ಸ್ ಮತ್ತು ಗೈಡ್ಸ್, ಹಾಗೂ ಬುಲ್ ಬುಲ್ಸ್, ರೋವರ್ಸ್ ಮತ್ತು ರೇಂಜರ್ಸ್ ಪ್ರಶಸ್ತಿ ಪತ್ರ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‌ರವರು ಹಸ್ತಾ ಪಿ.ಎ.ರವರಿಗೆ ಹೀರಖ್ ಗರಿ ಬುಲ್ ಬುಲ್ ರಾಜ್ಯ ಪುರಸ್ಕಾರ ಪ್ರಶಸ್ತಿ ಹಾಗೂ ವಿಘ್ನೇಶ್ ಮತ್ತು ಸಾತ್ವಿಕ್ ರವರಿಗೆ ಚತುರ್ಥ ಚರಣ್ ಕಬ್ಸ್ ಪ್ರಶಸ್ತಿ ಪ್ರದಾನ ಮಾಡಿದರು.
ಇವರಿಗೆ ಪ್ಲಾಕ್ ಲೀಡರ್ ಪೂಂಜಾಲಕಟ್ಟೆ ಸಿ.ಆರ್.ಪಿ.ಚೇತನಾ ಅವರು ಮಾರ್ಗದರ್ಶನ ಮಾಡಿದ್ದಾರೆ.

ಹಸ್ತಾ.ಪಿ.ಎ ಅವರು ಕಡಬ ಸಿ.ಎ.ಬ್ಯಾಂಕ್ ಸಿಬ್ಬಂದಿ ಆನಂದ ಗೌಡ ಕೋಂಕ್ಯಾಡಿ ಮತ್ತು ಪೂರ್ಣಿಮಾ ಜಿ ದಂಪತಿಗಳ ಪುತ್ರಿ, ವಿಘ್ನೇಶ್ ಅವರು ದಿನೇಶ್ ಪೂಜಾರಿ ಪಿಜಕ್ಕಳ ಮತ್ತು ಜಯಶೀಲರವರ ಪುತ್ರ, ಸಾತ್ವಿಕ್‌ರವರು ಸುಂದರ ಗೌಡ ಪಾಲೋಳಿಮನೆ ಪಿಜಕ್ಕಳ ಮತ್ತು ಗೀತಾರವರ ಪುತ್ರ.

LEAVE A REPLY

Please enter your comment!
Please enter your name here