ಹಿರೇಬಂಡಾಡಿ ಸರೋಳಿಯ ಮೋನಪ್ಪ ಗೌಡ ಎಎಸ್‌ಐಯಾಗಿ ಮುಂಭಡ್ತಿ

0

ಪುತ್ತೂರು: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿದ್ದ ಹಿರೇಬಂಡಾಡಿಯ ಸರೋಳಿ ನಿವಾಸಿ ಮೋನಪ್ಪ ಗೌಡರವರ ಎಎಸ್‌ಐಯಾಗಿ ಮುಂಭಡ್ತಿ ಪಡೆದು ಪುತ್ತೂರು ನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಹಿರೇಬಂಡಾಡಿ ಸರೋಳಿ ಕುಕ್ಕಪ್ಪ ಗೌಡ ಮತ್ತು ರುಕ್ಮಿಣಿ ದಂಪತಿ ಪುತ್ರನಾಗಿರುವ ಮೋನಪ್ಪರವರು 1996ರಲ್ಲಿ ಪೊಲೀಸ್ ಇಲಾಖೆಗೆ ಕಾನ್‌ಸ್ಟೇಬಲ್ ಆಗಿ ವೇಣೂರು ಪೊಲೀಸ್ ಠಾಣೆಗೆ ನೇಮಕಗೊಂಡಿದ್ದರು. ನಂತರ ಪುತ್ತೂರು ಗ್ರಾಮಾಂತರ ಠಾಣೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2015ರಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಪದೋನ್ನತಿ ಪಡೆದು ಕಡಬ ಹಾಗೂ ಪುಂಜಾಲಕಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಎಎಸ್‌ಐಯಾಗಿ ಮುಂಭಡ್ತಿ ಪಡೆದು ಪುತ್ತೂರು ನಗರ ಠಾಣೆಗೆ ವರ್ಗಾವಣೆಗೊಂಡಿರುತ್ತಾರೆ. ಇವರು ಪೊಲೀಸ್ ಇಲಾಖೆಯಲ್ಲಿ ಒಟ್ಟು 28 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುತ್ತಾರೆ.

LEAVE A REPLY

Please enter your comment!
Please enter your name here