ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ ಉದ್ಯಮಿ ಮಿಥುನ್ ಸಂಪ್ಯ

0

ಪುತ್ತೂರು :ಸ್ಥಳೀಯವಾಗಿ ಹಾಗೂ ವಿದೇಶಗಳಿಗೂ ಹಾಳೆತಟ್ಟೆ ರಫ್ತು ವ್ಯವಹಾರ ಮಾಡುತ್ತಿರುವಂತಹ ಬಲ್ನಾಡು ಉಜ್ರುಪಾದೆ ಶ್ರೀ ಮಹಮ್ಮಾಯಿ ಡಿಸ್ಪೊಸಿಬಲ್ ಪ್ರಾಡಕ್ಟ್ಸ್ ಇದರ ಮಾಲೀಕ , ಉದ್ಯಮಿ ಮಿಥುನ್ ಸಂಪ್ಯ ಇವರು ಜ.23 ರಂದು ಇಕೋ ಆಂಬ್ಯುಲೆನ್ಸ್ ನ್ನು ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದರು.

ನೂತನ ಆಂಬ್ಯುಲೆನ್ಸ್ ಹಸ್ತಾಂತರವು ಪ್ರಗತಿ ಆಸ್ಪತ್ರೆ ಆವರಣದಲ್ಲಿ ನಡೆಯಿತು. ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಆಂಬ್ಯುಲೆನ್ಸ್ ನ್ನು ಆಸ್ಪತ್ರೆಯ ಆಡಳಿತಧಿಕಾರಿ ಡಾ. ಶ್ರೀಪತಿ ರಾವ್ ಇವರಿಗೆ ಹಸ್ತಾಂತರಿಸಿ ,ಹಾರೈಸಿದರು.ಈ ವೇಳೆ ಡಾ. ಸುಧಾ ಶ್ರೀಪತಿ ರಾವ್ , ಮಿಥುನ್ ಸಂಪ್ಯ , ಭಾರತ್ ಅಟೋಕಾರ್ಸ್ ಉದ್ಯೋಗಿ ಆನಂದ್ ನಾಯ್ಕ್ ಹಾಗೂ ಆಸ್ಪತ್ರೆ ಸಿಬಂದಿ ವರ್ಗದ ಸಹಿತ ಹಲವರು ಹಾಜರಿದ್ದರು.

LEAVE A REPLY

Please enter your comment!
Please enter your name here