ಅರಿಯಡ್ಕ ಟೆಂಪೋ ಚಾಲಕ ನೇಣು ಬಿಗಿದು ಆತ್ಮಹತ್ಯೆ

0

ಪುತ್ತೂರು: ಅರಿಯಡ್ಕ ಗ್ರಾಮದ ಕುರಿಂಜ ಪೊನ್ನೆತ್ತಳ್ಕ ನಿವಾಸಿ ಟೆಂಪೋ ಚಾಲಕ ಮನೆಯ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.25ರಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಅರಿಯಡ್ಕ ಗ್ರಾಮದ ಕುರಿಂಜ ಪೊನ್ನೆತ್ತಳ್ಕ ದಿ.ಅಪ್ಪಯ್ಯ ಮಣಿಯಾಣಿ ಎಂಬವರ ಪುತ್ರ ಯಾದವ ಯಾನೆ ರವೀಂದ್ರ(45ವ) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಅವರು ಮಹಿಂದ್ರ ಮಿನಿ ಟೆಂಪೋ ಚಾಲಕರಾಗಿದ್ದು, ಜ.25ರಂದು ಅವರು ಮನೆಯಿಂದ ಸ್ವಲ್ಪ ದೂರ ಟೆಂಪೋ ನಿಲ್ಲಿಸಿ ಅಲ್ಲಿಯೇ ಪಕ್ಕದಲ್ಲಿರುವ ಸಿರಿ ಹೊನ್ನೆ ಮರದ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಮೃತರು ತಾಯಿ ರತ್ನಾವತಿ, ಪತ್ನಿ ಮಾಧವಿ, ಪುತ್ರ ಧನ್ವಿನ್ ,ಪುತ್ರಿ ದೀಕ್ಷಾ ಹಾಗೂ ಸಹೋದರಿ ಶಕುಂತಳಾ, ಸಹೋದರ ದಿವಾಕರ ಮಣಿಯಾಣಿ ಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here