ಜ26,27 ರಂದು ಕೆಯ್ಯೂರು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟ 

0

ಕೆಯ್ಯೂರು;  ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ (ರಿ) ಕೆಯ್ಯೂರು ಇದರ ವತಿಯಿಂದ ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟ  ಜ.26,ರಿಂದ ಜ.27 ವರೆಗೆ ಕೆಪಿಎಸ್  ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ನಡೆಯಲಿದೆ. ಇದರ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ತಿಮಪ್ಪ ಪೂಜಾರಿ ಕಣಿಯಾರು ಮಾಡಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಪ್ರಗತಿಪರ ಕೃಷಿಕರಾದ ಎನ್ ದಿವಾಕರ ರೈ ಸಣಂಗಳ,ಇ.ಸಂತೋಷ್ ಕುಮಾರ್ ರೈ ಇಳಂತಾಜೆ, ವೇಣುಗೋಪಾಲ ರೈ ನೂಜಿ,, ಕೆಪಿಎಸ್ ಕೆಯ್ಯೂರು ಪದವಿಧರೇತರ ಮುಖ್ಯ ಗುರು ಬಾಬು.ಎಂ,  ಬಿ.ಜಿ.ಎಂ.ಮಾಡಾವು ಗೌರವದ್ಯಕ್ಷ ಇಬ್ರಾಹಿಂ ಹಾಜಿ ಮಾಡಾವು, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಕೆಯ್ಯೂರು ಒಕ್ಕೂಟ ಚಂದ್ರಶೇಖರ ಕೆ.ಎಸ್, ಕೆಯ್ಯೂರು ಮಾಡಾವು ವರ್ತಕ ಸಂಘ ಸ್ಥಾಪಾಕದ್ಯಕ್ಷ ಆನಂದ ರೈ ದೇವಿನಗರ    ಕೆಯ್ಯೂರು ಗ್ರಾ.ಪಂ, ಮಾಜಿ ಅದ್ಯಕ್ಷ ಹರಿಶ್ಚಂದ್ರ ಆಚಾರ್ಯ ಕೊಡಂಬು, ಕೆಯ್ಯೂರು ಗ್ರಾ.ಪಂ. ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಉದ್ಯಮಿಗಳಾದ ಲಕ್ಷ್ಮಿ ಇಲೆಕ್ಟ್ರೀಕಲ್ಸ್ ಕೆಯ್ಯೂರು ಮೋನಪ್ಪ ಪಿ. ಪಲ್ಲತ್ತಡ್ಕ, ಶೀನಪ್ಪ ರೈ ದೇವಿನಗರ ಉಪಸ್ಥಿತರಿರುವರು. ಜ27 ರಂದು ಸಮಾರೋಪ ಸಮಾರಂಭದಲ್ಲಿ ಸಭಾದ್ಯಕ್ಷತೆಯನ್ನು ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಛಾ ಉಪಾದ್ಯಕ್ಷ ಸಹಜ್ ರೈ ಬಳಜ್ಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆದಂಬಾಡಿ ಕೆಯ್ಯೂರು ಸಿ.ಎ. ಬ್ಯಾಂಕ್ ಅದ್ಯಕ್ಷ ಶಶಿಧರ ರಾವ್ ಬೊಳಿಕಲ, ಕೆಪಿಎಸ್ ಕೆಯ್ಯೂರು ಕಾರ್ಯದ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಕೆಯ್ಯೂರು ಗ್ರಾ.ಪಂ.ಉಪಾದ್ಯಕ್ಷೆ ಸುಮಿತ್ರಾ ದಿವಾಕರ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ, ಯುವ ಉದ್ಯಮಿಗಳಾದ ಸಂದೀಪ್ ರೈ ನಂಜೆ, ಅಕ್ಷಯ್ ರೈ ದಂಬೆಕಾನ, ಹನೀಪ್ ಕೆ.ಎಂ, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಸ್ಥಾಪಕಧ್ಯಕ್ಷ ರಾಧಕೃಷ್ಣ ರೈ  ಸಣಂಗಳ,ಗೌರವ ಉಪಸ್ಥಿತಿ ಯಲ್ಲಿ ಕೆಯ್ಯೂರು ಗ್ರಾ.ಪಂ.ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ.ರೈ, ಕೆದಂಬಾಡಿ, ಕೆಯ್ಯೂರು ಸಿ.ಎ.ಬ್ಯಾಂಕ್ ನಿರ್ದೇಶಕ ಸಂತೋಷ್ ರೈ ಕೊರಂಗ, ಅರಣ್ಯ ಇಲಾಖೆ ದಿನೇಶ್ ಎಸ್ ಸಂಪ್ಯ, ಶ್ರೀ ಕ್ಷೇತ್ರ ಕೊರಗಜ್ಜ ದೈವಸ್ಥಾನ ಕೊಲ್ಯ,ಪೆರುವಾಜೆ ಅರ್ಚಕ ಜಯಂತ, ಬಿಂದು ಗ್ರೂಪ್ಸ್ ಪ್ರೋ ಕ್ಯೂರ್ ಮೆಂಟ್ ಮ್ಯಾನೇಜರ್ ಮುರಳಿಧರ ಪೂಜಾರಿ ಕೆಂಗುಡೇಲು, ಸಾಪ್ಟ್ವೇರ್ ಇಂಜಿನಿಯರ್ ಹರಿಪ್ರಸಾದ್ ಬಾಕ್ತಿಮಾರ್, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮುಂಡೂರು ಸಹ ಶಿಕ್ಷಕ ಅಬ್ದುಲ್ ಬಶೀರ್, ಶ್ರೀ ಲಕ್ಷ್ಮಿ ವೆಂಕಟರಮಣ ಮಠ ದೇರ್ಲ ಸಂಚಾಲಕ ಶಿವಶ್ರೀ ರಂಜನ್ ರೈ ದೇರ್ಲ, ಕೆಯ್ಯೂರು ಮಾಡಾವು ವರ್ತಕ ಸಂಘ ಅಧ್ಯಕ್ಷ ಅಬ್ದುಲ್ ರಜಾಕ್ ಎ, ಶ್ರೀ ದುರ್ಗಾ ಯುವಕ ಮಂಡಲ ಕೆಯ್ಯೂರು ಅಧ್ಯಕ್ಷ ಹರೀಶ್ ಪಾಟಾಳಿ, ಉದ್ಯಮಿಗಳಾದ ಅಮರನಾಥ ರೈ ನೂಜಿ, ದಾಮೋದರ ಎಂ.ಸಂತೋಷ್ ನಗರ, ಎಂ.ಆರ್.ಪಿ.ಎಲ್ ಮಂಗಳೂರು ಪ್ರದೀಪ್ ಕುಮಾರ್ ಎಂ.ಆರ್. ಉಪಸ್ಥಿತರಿರುವರು ಎಂದು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ  ದಿನೇಶ್ ಕೆ.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here