ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಡಗನ್ನೂರುಃ  ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಶಬರಿನಗರ ಸುಳ್ಯಪದವು ಇದರ ವತಿಯಿಂದ ಮಾ.10 ಮತ್ತು 11 ರಂದು ನಡೆಯುವ  ಸ್ವಾಮಿ ಕೊರಗಜ್ಜ ಹಾಗೂ ಗುಳಿಗ ದೈವದ ವಾರ್ಷಿಕ  ನೇಮೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ  ನಡೆಯಲಿರುವುದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಜ.14 ರಂದು ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ನಡೆಯಲಿರುವುದು.

ಸುಳ್ಯಪದವು ಪ್ರಸಿದ್ಧ ಜ್ಯೋತಿಷ್ಯರಾದ ರಂಜನ್ ಬಲ್ಯಾಯ ದೇವಸ್ಯ ಸುಳ್ಯಪದವು  ನೇಮೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಂ ಮರದಮೂಲೆ, ಜತೆ ಕಾರ್ಯದರ್ಶಿ ವಿನಯ್ ದೇವಸ್ಯ ಉಪಾಧ್ಯಕ್ಷ ಸದಾನಂದ ರೈ ಬೋಳಂಕೂಡ್ಲು, ಕೋಶಾಧಿಕಾರಿ ಬಾಸ್ಕರ ಹೆಗ್ಡೆ  ಶಬರಿನಗರ, ಪೂಜಾಕರ್ಮಿ ಮಾಧವ ಸಾಲಿಯಾನ್ ಮರದಮೂಲೆ, ಅಜಿತ್ ಕಾಯರ್ ಪದವು,  ಪ್ರಶಾಂತ್ ನಿಡಿಯಡ್ಕ ರವಿಶಂಕರ್ ಬಜ. ಮತ್ತು ಮಾಧವ ನಾಯಕ್ ಇಂದಾಜೆ , ಮತ್ತು ಸಮಿತಿ ಸದಸ್ಯರುಗಳು ಹಾಗೂ ಊರಿವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here