ಸರಕಾರಿ ಜಮೀನಿನಲ್ಲಿ ಅಕ್ರಮ ಮನೆ ತೆರವಿಗೆ ಮುಂದಾದ ಅಧಿಕಾರಿಗಳು

0

ಪುತ್ತೂರು: ಸರಕಾರಿ ಜಮೀನಿನಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಿದ್ದಾರೆಂಬ ದೂರಿಗೆ ಸಂಬಂಧಿಸಿ ಮನೆ ತೆರವು ಮಾಡಲು ಇಲಾಖೆಯಿಂದ ಬಂದಿರುವ ಆದೇಶದಂತೆ ತಹಸೀಲ್ದಾರ್ ಸಹಿತ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ ಘಟನೆ ನಗರಸಭೆ ವ್ಯಾಪ್ತಿಯ ಪಡ್ಡಾಯೂರಿನಲ್ಲಿ ಜ.25ರಂದು ನಡೆದಿದೆ.


ಪಡ್ಡಾಯೂರು ಸಮೀಪ ಸರಕಾರಿ ಜಮೀನಿನಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಿರುವುದಾಗಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.ಈ ಕುರಿತ ಪರಿಶೀಲನೆಯಾಗಿ ಮನೆ ತೆರವಿಗೆ ಆದೇಶ ಬಂದಿತ್ತು. ಈ ನಿಟ್ಟಿನಲ್ಲಿ ತಹಸೀಲ್ದಾರ್ ಸಹಿತ ನಗರಸಭೆ ಅಽಕಾರಿಗಳು ಸ್ಥಳಕ್ಕೆ ತೆರಳಿ ಮನೆ ತೆರವಿಗೆ ಮುಂದಾದಾಗ ಮನೆಯೊಳಗಿರುವ ಸಾಮಾಗ್ರಿಗಳನ್ನು ಖಾಲಿ ಮಾಡುವಂತೆ ಮನೆ ಮಂದಿಗೆ ಕಾಲಾವಕಾಶ ನೀಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮನೆ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here