ತರಕಾರಿ ವರ್ತರಿಂದ ಲಂಚಕ್ಕೆ ಬೇಡಿಕೆ ಆರೋಪ-ಎಪಿಎಂಸಿ ಸ.ಕಾರ್ಯದರ್ಶಿ ರಾಮಚಂದ್ರರ ಮೇಲಿನ ದೂರು-ತನಿಖೆಗೆ ತಂಡ ರಚನೆ

0

ಪುತ್ತೂರು:ಎಪಿಎಂಸಿ ಯಾರ್ಡ್ನ ತರಕಾರಿ ವರ್ತಕರಿಗೆ ಪರವಾನಿಗೆ ನೀಡಲು ಹಾಗು ಯಾರ್ಡ್ ಒಳಗೆ ವಾಹನ ಪ್ರವೇಶಕ್ಕೆ ಲಂಚದ ಬೇಡಿಕೆ ಇಟ್ಟಿರುವ ಆರೋಪದಡಿ ಕಡ್ಡಾಯ ರಜೆ ಮೇಲೆ ತೆರಳಲು ಆದೇಶವಾಗಿರುವ ಪುತ್ತೂರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಮಚಂದ್ರ ಅವರ ಮೇಲಿನ ದೂರಿನ ವಿಚಾರಣೆಗೆ ಮೂವರು ಅಧಿಕಾರಿಗಳ ತಂಡ ರಚಿಸಲಾಗಿದ್ದು ಫೆ.3ರಂದು ಪುತ್ತೂರು ಎಪಿಎಂಸಿ ಆಡಳಿತ ಕಚೇರಿಯಲ್ಲಿ ವಿಚಾರಣೆ ನಿಗದಿಯಾಗಿದೆ.

ರಾಮಚಂದ್ರ ಅವರ ವಿರುದ್ಧದ ದೂರಿನ ವಿಚಾರಣೆಗಾಗಿ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸೋಮಶೇಖರ ಬಿ.ನ್ಯಾಮಗೌಡ, ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಹೆಚ್.ಪಿ.ಮೋಹನ್ ಮತ್ತು ತುಮಕೂರು ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕ ಡಾ|ಬಿ.ರಾಜಣ್ಣ ಅವರನ್ನೊಳಗೊಂಡ ತಂಡವನ್ನು ರಚನೆ ಮಾಡಿರುವ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು 15 ದಿನಗಳೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.

ಪುತ್ತೂರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಮಚಂದ್ರ ಅವರು ಯಾರ್ಡ್ನ ತರಕಾರಿ ವ್ಯಾಪಾರಸ್ಥರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಮತ್ತು ತರಕಾರಿ ವಾಹನಗಳ ಒಳ ಪ್ರವೇಶಕ್ಕೆ ಅಡ್ಡಿಪಡಿಸುವುದರಿಂದ ವಾಹನ ಮಾಲಿಕರು ಮತ್ತು ಚಾಲಕರು ಪುತ್ತೂರು ಸಮಿತಿಗೆ ಬರಲು ನಿರಾಕರಿಸುತ್ತಿದ್ದರು.ಇದರಿಂದಾಗಿ ತರಕಾರಿ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಭಾರೀ ನಷ್ಟ ಉಂಟಾಗಿತ್ತು.ಈ ಕುರಿತು ವ್ಯಾಪಾರಸ್ಥರು ರಾಮಚಂದ್ರ ಅವರನ್ನು ವಿಚಾರಿಸಿದಾಗ ತರಕಾರಿ ವರ್ತಕರಿಗೆ ಪರವಾನಿಗೆ ನೀಡಲು ಮತ್ತು ವಾಹನಗಳ ಒಳ ಪ್ರವೇಶಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಯಾರ್ಡ್ನ 12 ಜನ ತರಕಾರಿ ವರ್ತಕರು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.ಈ ದೂರನ್ನು ಪರಿಶೀಲಿಸಿದ ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಜಿ.ಎಂ.ಗAಗಾಧರ ಸ್ವಾಮಿಯವರು,ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಮಚಂದ್ರ ಅವರ ಮೇಲಿನ ದುರ್ವತನೆ ಆರೋಪ ಮತ್ತು ಅವರ ಕಾರ್ಯವೈಖರಿಯನ್ನು ಗಮನಿಸಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಜ.16ರಿಂದ ಮುಂದಿನ 2 ತಿಂಗಳ ತನಕ ಅಥವಾ ಮುಂದಿನ ಆದೇಶದ ತನಕ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಆದೇಶ ಮಾಡಿದ್ದರು.

ತನಿಖಾ ತಂಡ ರಚನೆ-15 ದಿನಗಳೊಳಗೆ ವರದಿ ನೀಡಲು ಸೂಚನೆ: ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಮಚಂದ್ರ ಅವರ ಮೇಲಿನ ದೂರಿನ ಕುರಿತು ತನಿಖೆ ನಡೆಸಲು ಮೂವರು ಅಧಿಕಾರಿಗಳ ತಂಡವನ್ನು ನೇಮಿಸಿರುವ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು, ದೂರಿನ ಕುರಿತು ಪರಿಶೀಲಿಸಿ 15 ದಿನಗಳೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.ಈ ಹಿನ್ನೆಲೆಯಲ್ಲಿ ತನಿಖೆಗಾಗಿ ನೇಮಕಗೊಂಡಿರುವ ಅಧಿಕಾರಿ ತ್ರಯರ ತಂಡ ಫೆ.3ರಂದು ಪುತ್ತೂರು ಎಪಿಎಂಸಿ ಆಡಳಿತ ಕಚೇರಿಯಲ್ಲಿ ವಿಚಾರಣೆ ನಡೆಸಲಿದೆ.ಈ ಕುರಿತು ಪುತ್ತೂರು ಎಪಿಎಂಸಿ ಕಾರ್ಯದರ್ಶಿಯವರಿಗೆ ತನಿಖಾ ತಂಡ ಈಗಾಗಲೇ ಪತ್ರ ಬರೆದಿದ್ದು ಆ ದಿನ ಬೆಳಿಗ್ಗೆ 11 ಗಂಟೆಗೆ ಸಂಬAಧಿಸಿದವರು ಕಚೇರಿಯಲ್ಲಿ ಹಾಜರಿರಬೇಕು ಮತ್ತು ತಾವೂ ಹಾಜರಿದ್ದು ತಮಮ್ ಹೇಳಿಕೆ ಸಲ್ಲಿಸಲು ಕೋರಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here