ಸತ್ಯಕ್ಕೆ ದೂರವಾದ ವಿಷಯ ಪ್ರಕಟಿಸಿ ತೇಜೋವಧೆ ಮಾಡಿದ ಆರೋಪ-ನಿಖರ ನ್ಯೂಸ್‌ನ ಪ್ರದೀಪ್ ಶೆಟ್ಟಿ ವಿರುದ್ಧ ನವೀನ್ ರೈ ಕೈಕಾರ ದೂರು-ನ್ಯಾಯ ಸಿಗದೇ ಇದ್ದಲ್ಲಿ ಪ್ರದೀಪ್ ಶೆಟ್ಟಿಯ ಪತ್ನಿಯ ಅಜ್ಜನ ಮನೆ ಮುಂದೆ ಉಪವಾಸ ಸತ್ಯಾಗ್ರಹ-ನವೀನ್ ರೈ ಹೇಳಿಕೆ

0

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಸತ್ಯಕ್ಕೆ ದೂರವಾದ ವಿಷಯಗಳನ್ನು ಹಾಕಿ ವೈಭವೀಕರಣಗೊಳಿಸಿ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ನಿಖರ ನ್ಯೂಸ್‌ನ ಪ್ರದೀಪ್ ಶೆಟ್ಟಿ ವಿರುದ್ಧ ಒಳಮೊಗ್ರು ಕೈಕಾರದ ನವೀನ್ ಕುಮಾರ್ ರೈ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ವಿವರ:
ಒಳಮೊಗ್ರು ಕೈಕಾರದ ನವೀನ್ ಕುಮಾರ್ ರೈ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ‘ನಿಖರ ನ್ಯೂಸ್‌ನಲ್ಲಿ ಸಂಸ್ಥೆಯ ಸಂಪಾದಕರಾದ ಪ್ರದೀಪ್ ಶೆಟ್ಟಿ ನನ್ನ ಬಗ್ಗೆ ಅಲ್ಲದೆ ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯೆಯಾಗಿರುವ ನನ್ನ ಪತ್ನಿ ಶ್ರೀಮತಿ ನಿಮಿತ ಎನ್. ರೈಯವರ ಬಗ್ಗೆ ಹಾಗೂ ನನ್ನ ಕುಟುಂಬದ ಸದಸ್ಯರ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸತ್ಯಕ್ಕೆ ದೂರವಾದ ವಿಷಯಗಳನ್ನು ಹಾಕಿ ವೈಭವೀಕರಿಸಿಗೊಳಿಸಿ ತೇಜೋವಧೆ ಮಾಡಿದ್ದಾರೆ. ದಿನಾಂಕ 25-01-2024ರಂದು ಜಾಲತಾಣಕ್ಕೆ ಹಾಕುವ ಮೊದಲು ಕೆಲವು ಮೂಲಗಳ ಮೂಲಕ ಪ್ರಕಟಿಸದಂತೆ ಇರಲು ಹಣದ ಅಮಿಷ ನೀಡಿದ್ದಾರೆ. ಆದರೆ ಅಮಿಷಕ್ಕೆ ನಾನು ಬಗ್ಗದ ಕಾರಣ ಅವರು ಯಾವುದೇ ಪೊಲೀಸ್ ಇಲಾಖೆಯಿಂದ ಸತ್ಯವಾದ ಮಾಹಿತಿ ಪಡೆಯದೆ ನಟೋರಿಯಸ್ ಅನ್ನೋ ಪದ ಬಳಸಿ ರಾಜಕೀಯ ದುರುದ್ದೇಶವನ್ನು ಇಟ್ಟು ನಿಖರ ನ್ಯೂಸ್‌ನಲ್ಲಿ ಹಾಕಿರುವುದರಿಂದ ನಾನು ಮತ್ತು ನನ್ನ ಕುಟುಂಬ ಮಾನಸಿಕವಾಗಿ ಕುಗ್ಗಿರುತ್ತೇವೆ. ಆದ್ದರಿಂದ ಅವರ ಮೇಲೆ ಕಾನೂನು ಮುಖಾಂತರ ಕ್ರಮ ಕೈಗೊಳ್ಳಬೇಕೆಂದು ಕೇಳುತ್ತೇನೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳದೇ ಹೋದಲ್ಲಿ ನ್ಯಾಯ ಸಿಗುವವರೆಗೆ ಪ್ರದೀಪ್ ಶೆಟ್ಟಿಯವರ ಪತ್ನಿಯ ಅಜ್ಜ ನೀರ್ಪಾಡಿ ದಿ. ಸೋಮಪ್ಪ ರೈಯವರ ಮನೆಯ ಮುಂದೆ ನನ್ನ ಕುಟುಂಬ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ನವೀನ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here