ಸವಣೂರು ಪ್ರಾ.ಕೃ.ಪ.ಸಹಕಾರ ಸಂಘಕ್ಕೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ ಭೇಟಿ

0

ಪುತ್ತೂರು : ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸವಣೂರು ಪ್ರಧಾನ ಕಚೇರಿಗೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟರವರು ಭೇಟಿ ನೀಡಿ ಸಂಘದ ನೂತನ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಹಾಗೂ ಎಲ್ಲಾ ನಿರ್ದೇಶಕರುಗಳನ್ನು ಅಭಿನಂದಿಸಿದರು.

ಬಳಿಕ ಮಾತನಾಡಿದ ಅವರು ಇಲ್ಲಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಎಲ್ಲಾ 12 ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವುದು ತುಂಬಾ ಖುಷಿಯ ವಿಷಯವಾಗಿದ್ದು, ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕ ಮಂಡಳಿಗೆ ಮತ್ತು ಬಿಜೆಪಿ- ಸಹಕಾರ ಭಾರತಿಯ ಮುಖಂಡರು, ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ಹೇಳಿದ ಅವರು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಚ್ಚು ಕಟ್ಟಾದ ವ್ಯವಸ್ಥೆಯನ್ನು ನೋಡಿದ ತಕ್ಷಣ ಇಲ್ಲಿನ ಸುಭದ್ರವಾದ ದಕ್ಷ ಆಡಳಿತದ ಕಾರ್ಯನಿರ್ವಹಣೆಯನ್ನು ನಾವು ಅರಿಯಬಹುದು ಎಂದು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯ ನೆಲೆಯಲ್ಲಿ ಪ್ರವಾಸ ಮಾಡುತ್ತಿರುವ ನಾನು ಸವಣೂರಿಗೆ ಬಂದಿರುವ ಈ ಸಂದರ್ಭದಲ್ಲಿ ನನ್ನನ್ನು ಗೌರವಿಸಿದ ಸವಣೂರು ಸಹಕಾರ ಸಂಸ್ಥೆ ಗೆ ಕೃತಜ್ಞನಾಗಿದ್ದೇನೆ ಎಂದರು. ಬಿಜೆಪಿ ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕಡೆಂಜಿಯವರು ಮಾತನಾಡಿ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ಮೊಟ್ಟಮೊದಲ ಬಾರಿಗೆ ಸವಣೂರಿಗೆ ಆಗಮಿಸಿದ ಬ್ರಿಜೇಶ್ ಚೌಟರವರನ್ನು ಅಭಿನಂದಿಸಿದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಸಮಿತಿಯಿಂದ ಬ್ರಿಜೇಶ್ ಚೌಟರವರನ್ನು ಗೌರವಿಸಲಾಯಿತು.


ಸಂಘದ ನಿರ್ದೇಶಕ ಉದಯ ರೈ ಮಾದೋಡಿ, ಗಣೇಶ್ ನಿಡ್ವಣ್ಣಾಯ, ಚೆನ್ನಪ್ಪ ಗೌಡ ನೂಜಿ, ಪ್ರಕಾಶ್ ರೈ ಸಾರಕೆರೆ, ಅಶ್ವಿನ್ ಎಲ್ ಶೆಟ್ಟಿ, ಶಿವಪ್ರಸಾದ್ ಕಳುವಾಜೆ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ, ಜ್ಞಾನೇಶ್ವರಿ, ಸೀತಾಲಕ್ಷ್ಮೀ, ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ,ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಇಂದಿರಾ ಬಿ.ಕೆ., ಸವಣೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ.ಎಸ್, ಸದಸ್ಯರಾದ ಗಿರಿಶಂಕರ ಸುಲಾಯ,ರಾಜೀವಿ ಶೆಟ್ಟಿ ,ತೀರ್ಥರಾಮ ಕೆಡೆಂಜಿ, ಶೀನಪ್ಪ ಶೆಟ್ಟಿ ನೆಕ್ರಾಜೆ ,ಚಂದ್ರಾವತಿ ಸುಣ್ಣಾಜೆ ,ತಾರಾನಾಥ ಬೊಳಿಯಾಲ, ಬೆಳಂದೂರು ಗ್ರಾ.ಪಂ.ಉಪಾಧ್ಯಕ್ಷ ಜಯಂತ ಅಬೀರ ,ಸದಸ್ಯರಾದ ಮೋಹನ ಅಗಳಿ, ಲೋಹಿತಾಕ್ಷ ಕೆಡೆಂಜಿಕಟ್ಟ,ಪ್ರವೀಣ್ ಕೆರೆನಾರು,ಬಿಜೆಪಿ ಪಾಲ್ತಾಡಿ ಶಕ್ತಿ ಕೇಂದ್ರ ಪ್ರಮುಖ್ ಮಹೇಶ್ ಕೆ.ಸವಣೂರು ,ಸತೀಶ್ ಬಲ್ಯಾಯ ,ಸುಪ್ರೀತ್ ರೈ ಖಂಡಿಗ,ಪ್ರಜ್ವಲ್ ಕೆ.ಆರ್,ಸುರೇಶ್ ರೈ ಸೂಡಿಮುಳ್ಳು ,ಯಶವಂತ ಕಳುವಾಜೆ ,ಅನಿಲ್ ಖಂಡಿಗ , ಶ್ರೀಧರ ಇಡ್ಯಾಡಿ,ಲಿಂಗಪ್ಪ ರೈ ಚೆಂಬುತ್ತೋಡಿ ,ಲೋಕೇಶ್ ಬರೆಪ್ಪಾಡಿ,ನಿರ್ಮಲ ಕೇಶವ ಅಮೈ ,ಪ್ರಸಾದ್ ರೈ ಬೈಲಾಡಿ, ರಾಮಕೃಷ್ಣ ಪ್ರಭು ಸವಣೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here