ವಿಟ್ಲ ಜೇಸಿಐ ಘಟಕದ ವತಿಯಿಂದ ಸಾಧಕರಿಗೆ ಸನ್ಮಾನ

0

ವಿಟ್ಲ: ವಿಟ್ಲ ಜೇಸಿಐ ಘಟಕದ ವತಿಯಿಂದ ಕಮ್ಯೂನಿಟಿ ಡೆವಲಪ್ಮೆಂಟ್ ಕಾರ್ಯಕ್ರಮದ ಪ್ರಯುಕ್ತ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬೊಬ್ಬಕ್ಕೇರಿ ಗಜಾನನ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕ್ರೀಡೆಗಳಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಾದ ದ್ಯಾನ್ ಮತ್ತು ಜಶ್ವಂತ್, ಸಮಾಜ ಸೇವಾ ಸಂಸ್ಥೆ  ಸಮರ್ಪಣ್ ವಿಟ್ಲ ಇದರ ಅಧ್ಯಕ್ಷ ಯಶವಂತ ಎನ್, ಕಾರ್ಯದರ್ಶಿ ರೋಹಿತ್ ಕಟ್ಟೆ ಹಾಗೂ ವಿಟ್ಲದಲ್ಲಿ ಸ್ಕೌಟ್ ಗೈಡ್ ಜಿಲ್ಲಾ ಕ್ಯಾಂಪೋರಿ ಯಶಸ್ವಿಯಾಗಿ ನಡೆಸಿದ ಪ್ರಭಾಕರ ಶೆಟ್ಟಿ ದಂಬೆಕಾನ ಅವರನ್ನು ಸನ್ಮಾನಿಸಲಾಯಿತು. ವಿಟ್ಲ ಜೆಸಿಐ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಮುರಳಿ ಪ್ರಸಾದ್, ಕೋಶಾಧಿಕಾರಿ ಲೂವಿಸ್ ಮಸ್ಕರೇನಸ್, ನಿಕಟ ಪೂರ್ವ ಅಧ್ಯಕ್ಷ ಪರಮೇಶ್ವರ ಹೆಗ್ಡೆ, ಸದಸ್ಯರು ಗಳಾದ ಸಿಂಧು ಎಸ್ ಶೆಟ್ಟಿ, ಸಂದೀಪ್, ಅಣ್ಣಪ್ಪ ಸಾಸ್ತಾನ, ಸಿವಾನಿ ಶೆಟ್ಟಿ, ಸಂಜೀವ ಪೂಜಾರಿ, ಮಮತಾ ಎಸ್, ಹರೀಶ್ ಕೆ ವಿಟ್ಲ ವೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here