ಗವ್ಯ ಆಯುರ್ವೇದ ಚರ್ಮರೋಗ ಚಿಕಿತ್ಸಾ ವಿಭಾಗ ಉದ್ಘಾಟನೆ-ವಿಶೇಷ ಚರ್ಮರೋಗ ತಪಾಸಣಾ ಶಿಬಿರ

0

ಪುತ್ತೂರು: ಬಳ್ಳಿ ಆಯುರ್ ಗ್ರಾಮ-ಆಯುರ್ವೇದ ಆಸ್ಪತ್ರೆ ಗೋ ಸೇವಾ ಗತಿವಿಧಿ ಕರ್ನಾಟಕ, ದಕ್ಷಿಣ ಪ್ರಾಂತ ಇದರ ಆಶ್ರಯದಲ್ಲಿ ಗವ್ಯ ಆಯುರ್ವೇದ ಚರ್ಮರೋಗ ಚಿಕಿತ್ಸಾ ವಿಭಾಗ ಇದರ ಉದ್ಘಾಟನಾ ಕಾರ್ಯಕ್ರಮ ಜ.31 ರಂದು ಬಳ್ಳಿ ಆಯುರ್ ಗ್ರಾಮ ಮೂಲಿಕಾವನದಲ್ಲಿ ಜರಗಲಿದೆ.
ಗೋ ಸೇವಾ ಗತಿವಿಧಿ ಪಂಚಗವ್ಯ ‌ಮನುಷ್ಯ ಚಿಕಿತ್ಸೆ ಅಖಿಲ ಭಾರತ ಪ್ರಮುಖರು ಇವರು ಉದ್ಘಾಟಿಸಲಿದ್ದಾರೆ. ಜೊತೆಗೆ ಅನೇಕ ಗಣ್ಯರು ಉಪಸ್ಥಿತಲಿರುವರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಭಟ್ ನರ್ಸಿಂಗ್ ಹೋಂನ ಜೊಸ್ಸೀಸ್ ಆಯುರ್ ಕೇರ್ ನಲ್ಲಿ ಬೆಳಿಗ್ಗೆ ಗಂಟೆ ಹತ್ತರಿಂದ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೆ ವಿಶೇಷ ಚರ್ಮರೋಗ ತಪಾಸಣಾ ಶಿಬಿರವನ್ನು ಡಾ.ಡಿ.ಪಿ ರಮೇಶ್ ನಡೆಸಿಕೊಡಲಿರುವರು ಎಂದು 34 ನೆಕ್ಕಿಲಾಡಿ ಬಳ್ಳಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಸುಪ್ರೀತ್ ಲೋಬೊ, ಕೋಶಾಧಿಕಾರಿ ಡಾ.ಶೈನಿ ಪಾಯಿಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here