ಆರ್ಯಾಪು ಗ್ರಾ.ಪಂ.ನಲ್ಲಿ ವಿಶೇಷ ಗ್ರಾಮಸಭೆ

0

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್‌ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗೇಶ್ ಎಂ., ಕಾರ್ಯದರ್ಶಿ ಮೋನಪ್ಪ ಕೆ., ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಲಕ್ಷ್ಮಿಕಾಂತ್ ಹೆಗ್ಡೆ ಉಪಸ್ಥಿತರಿದ್ದರು. ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ತಾಲೂಕು ಪಚಾಯತ್‌ನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಕಲಚೇತನರ ಇಲಾಖೆಯ ಯೋಜನೆ ಹಾಗೂ ಹಿರಿಯ ನಾಗರೀಕರಿಗೆ ಸರಕಾರದಿಂದ ಸಿಗುವ ಮಾಹಿತಿ ನೀಡಿದರು. ಪಂಚಾಯತ್ ಸದಸ್ಯರುಗಳು ಮತ್ತು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್‌ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಬಾಲಕೃಷ್ಣ ಪಾಟಾಳಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, CHO, NRLM ಯೋಜನೆಯ ಸಿಬ್ಬಂದಿಗಳು, ಸರೋವರ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, MSW ವಿದ್ಯಾರ್ಥಿಗಳು ಮತ್ತು ವಿಶೇಷಚೇತನ ಫಲಾನುಭವಿಗಳು ಹಾಗೂ ವಿಶೇಷಚೇತನ 5 ಸಂಜೀವಿನಿ ಸಂಘಗಳ ಸದಸ್ಯರುಗಳು, ಹಿರಿಯ ನಾಗರಿಕರು ಉಪಸ್ಥಿತರಿದ್ದರು. ವಿಶೇಷಚೇತನರ ಅ.ದಿ.ನ.ವಿ ವಿಶೇಷ ಪೂರ್ಣಜ್ಯೊತಿ ಸಂಜೀವಿನಿ ವಿಶೇಷ ಚೇತನರ 5ನೇ ಸಂಘದ ಉದ್ಘಾಟನೆ ಮಾಡಲಾಯಿತು. ವಿಕಲಚೇತನ ಸಿಬ್ಬಂದಿ (VRW)ರವರನ್ನು ವಿಕಲ ಚೇತನ 4 ಸಂಘಗಳ ಪರವಾಗಿ ಮತ್ತು ವಿಶೇಷ ಚೇತನರ ಪರವಾಗಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here