ಜ.31ರಂದು ಅರುಣಾ ಕಲಾ ಮಂದಿರ ಶುಭಾರಂಭ

0

ಪುತ್ತೂರು: ಇಲ್ಲಿನ ಮುಖ್ಯರಸ್ತೆಯ ಮಾಧವಭಾಗ್ ನಲ್ಲಿ ಮದುವೆ, ನಿಶ್ಚಿತಾರ್ಥ, ಉಪನಯನ, ಔತಣಕೂಟ ಇತ್ಯಾದಿ ಶುಭ ಸಮಾರಂಭಗಳಿಗೆ ಸಂಪೂರ್ಣ ಹವಾ ನಿಯಂತ್ರಿತ ಸಭಾಭವನ ಅರಣಾ ಕಲಾ ಮಂದಿರ ಜ.31ರಂದು ಶುಭಾರಂಭಗೊಳ್ಳಲಿದೆ.

ಆನಂದ ಆಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ| ಗೌರಿ ಪೈ ದೀಪ ಬೆಳಗಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಶುಭ ಹಾರೈಸಲಿದ್ದಾರೆ. ಹಿರಿಯ ಬಟ್ಟೆ ವ್ಯಾಪಾರಿ ಕೆ.ವಾಮನ ಕುಡ್ವ, ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಅಶೋಕ ಪ್ರಭು, ಸುಳ್ಯ ಕರ್ನಾಟಕ ಪ್ಲೈವುಡ್ ಮಾಲಕ ಕೃಷ್ಣಕಾಮತ್, ವಾಸ್ತು ತಜ್ಞ ಪಿ.ಜಿ.ಜಗನ್ನಿವಾಸ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಮಾಲಕ ಪಿ.ರಮಾನಂದ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here