ಪಾಪೆಮಜಲು: ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ-ಶಾಲಾ ಕಾರ್ಯಾಧ್ಯಕ್ಷರ ಕಡೆಗಣನೆ – ಶಾಸಕರಿಗೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು

0

ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ಜ.30ರಂದು ನಡೆದ ಅರಿಯಡ್ಕ ಗ್ರಾ.ಪಂ ಮಕ್ಕಳ ಗ್ರಾಮಸಭೆಯ ಸಭಾ ವೇದಿಕೆಗೆ ಆಹ್ವಾನಿಸದೆ ಮತ್ತು ಸ್ವಾಗತ ಮಾಡದೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪಾಪೆಮಜಲು ಸರಕಾರಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಶಾಸಕರಿಗೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಹಾಗೂ ಪುತ್ತೂರು ತಾ.ಪಂ ಕಾರ್ಯರ್ನಿಹಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.


ಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ನಾನು ಭಾಗವಹಿಸಿದ್ದು ನನ್ನನ್ನು ವೇದಿಕೆಗೂ ಆಹ್ವಾನಿಸದೆ, ಕನಿಷ್ಠ ಸ್ವಾಗತವನ್ನೂ ಮಾಡದೆ ಗ್ರಾ.ಪಂ ಅಧ್ಯಕ್ಷರು ಮತ್ತು ಅಧಿಕಾರಿಗಳು ಅವಮಾನಿಸಿದ್ದಾರೆ. ಇದರಿಂದ ಬೇಸರಗೊಂಡು ಸಭೆಯ ಮಧ್ಯದಿಂದ ನಿರ್ಗಮಿಸಿದ್ದೇನೆ, ಈ ಬಗ್ಗೆ ತಾವು ಕಾನೂನಾತ್ಮಕವಾಗಿ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಪಾಪೆಮಜಲು ಸರಕಾರಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here