ಉಪ್ಪಿನಂಗಡಿ ಕಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘ- ಅಧ್ಯಕ್ಷರಾಗಿ ಜೋಸೆಫ್ ವಿ.ಎಂ ಪುನರಾಯ್ಕೆ, ಉಪಾಧ್ಯಕ್ಷರಾಗಿ ಜೆರಾಲ್ಡ್ ಮಸ್ಕರೇನ್ಹಸ್

0

ಪುತ್ತೂರು: ಉಪ್ಪಿನಂಗಡಿ ಕಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಐದು ವರ್ಷ(2024-29)ಗಳ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಜ.31 ರಂದು ಸಹಕಾರ ಸಂಘದ ಆವರಣದಲ್ಲಿ ನಡೆದಿದ್ದು ಹಾಲಿ ಅಧ್ಯಕ್ಷರಾದ ಜೋಸೆಫ್ ವಿ.ಎಂ.ರವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಜೆರಾಲ್ಡ್ ಮಸ್ಕರೇನ್ಹಸ್‌ರವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜ.22 ರಂದು ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಉಳಿದಂತೆ ನಿರ್ದೇಶಕರುಗಳಾಗಿ ಜೋನ್ ಫೆರ್ನಾಂಡೀಸ್, ಜೊಸ್ಸಿ ಸ್ಟೀವನ್ ಮೊಂತೇರೊ, ರೋಬರ್ಟ್ ಡಿ’ಸೋಜ, ವಿನ್ಸೆಂಟ್ ಬ್ರ್ಯಾಗ್ಸ್, ಸುನಿಲ್ ಬ್ರ್ಯಾಗ್ಸ್, ಇನಾಸ್ ರೊಡ್ರಿಗಸ್, ಪ್ರೆಸಿಲ್ಲ ಡಿ’ಸೋಜ, ಸವಿತ ರೀಟ ಮಸ್ಕರೇನ್ಹಸ್‌ರವರು ಆಯ್ಕೆಯಾಗಿದ್ದಾರೆ. ಸಂಘದ ಉಪವಿಧಿ ಹಾಗೂ ಸಹಕಾರ ಕಾಯ್ದೆಗೆ ಅನುಗುಣವಾಗಿ ಚುನಾಯಿಸಲ್ಪಡಬೇಕಾದ ಸ್ಥಾನಗಳು 13 ಆಗಿದ್ದು, ಇದರಲ್ಲಿ ಸಾಮಾನ್ಯ ಸ್ಥಾನಗಳು 7, ಹಿಂದುಳಿದ ಪ್ರವರ್ಗ ‘ಬಿ’ ಮೀಸಲು ಸ್ಥಾನ 1, ಮಹಿಳಾ ಸ್ಥಾನ 2 ಒಳಗೊಂಡಿರುತ್ತದೆ. ರಿಟರ್ನಿಂಗ್ ಆಫೀಸರ್ ಆಗಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, ಪುತ್ತೂರು ತಾಲೂಕು ಹಾಗೂ ಮಾರಾಟಾಧಿಕಾರಿ, ಪುತ್ತೂರು ಉಪ ವಿಭಾಗದ ಶೋಭಾ ಎನ್.ಎಸ್‌ರವರು ಚುನಾವಣೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here