ಶ್ರೀರಾಮಕುಂಜೇಶ್ವರ ಕ.ಮಾ ಪ್ರೌಢಶಾಲೆಗೆ ಹಾಸನ ಜಿಲ್ಲೆಯ ಗಣಿತ- ವಿಜ್ಞಾನ ಶಿಕ್ಷಕರ ಶೈಕ್ಷಣಿಕ ಭೇಟಿ

0

ಪುತ್ತೂರು: ಶ್ರೀರಾಮಕುಂಜೇಶ್ವರ ಕ.ಮಾಧ್ಯಮ ಪ್ರೌಢಶಾಲೆಗೆ ಹಾಸನ ಜಿಲ್ಲೆಯ ಗಣಿತ ಮತ್ತು ವಿಜ್ಞಾನ ಶಿಕ್ಷಕರು ಶೈಕ್ಷಣಿಕ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬ್ರಹ್ಮಗುಪ್ತ ಗಣಿತ ಪ್ರಯೋಗಾಲಯ , ಸಿ ವಿ ರಾಮನ್ ವಿಜ್ಞಾನ ಪ್ರಯೋಗಾಲಯ( ಅಟಲ್ ಟಿಂಕಾರಿಂಗ್ ಲ್ಯಾಬ್ )ಹಾಗೂ ವಿಜ್ಞಾನದ ಕುರಿತು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಶಿಕ್ಷಕರನ್ನು ಸ್ವಾಗತಿಸಿ, ಕಲಿಕೆಗೆ ಯಾವ ರೀತಿಯಲ್ಲಿ ಪ್ರಯೋಗಾಲಯಗಳು ಸಹಾಯಕವಾಗುತ್ತವೆ ಹಾಗೂ ಎಸ್.ಎಸ್.ಎಲ್. ಸಿ ಪರೀಕ್ಷಾ ಪೂರ್ವ ಸಿದ್ಧತೆಯ ಕುರಿತಾದಂತಹ ಮಾಹಿತಿಯನ್ನು ನೀಡಿ ತಾಲೂಕಿನಲ್ಲಿ ಅತ್ಯುತ್ತಮವಾದ ಗಣಿತ – ವಿಜ್ಞಾನ ಪ್ರಯೋಗಾಲಯಗಳನ್ನು ಸಂಸ್ಥೆ ಹೊಂದಿರುವುದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ವೀಕ್ಷಕರಿಗೆ ಶಾಲಾ ಗಣಿತ ಮತ್ತು ವಿಜ್ಞಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರತ್ಯಾಕ್ಷಿಕೆಯ ಮೂಲಕ ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್ ಹಾಗೂ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here