ದ.ಕ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಆಯ್ಕೆ-ಪುತ್ತೂರಿನ ಆರು ಮಂದಿಗೆ ಸ್ಥಾನ

0

ಪುತ್ತೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ವಿವಿಧ ವಿಭಾಗಗಳಿಗೆ ಅಧ್ಯಕ್ಷರ,7ಮಂಡಲಗಳ ಮಂಡಲ ಅಧ್ಯಕ್ಷರನ್ನು ಸೇರಿದಂತೆ ಜಿಲ್ಲಾ ಮಾಧ್ಯಮ ಪ್ರಮುಖ್‌ ಜಿಲ್ಲಾ ವಕ್ತಾರ, ಸಾಮಾಜಿಕ ಜಾಲತಾಣಗಳ ಸಂಚಾಲಕ ಮತ್ತು ಸಹಚಂಚಾಲಕ ಹಾಗೂ ಜಿಲ್ಲಾ ಪದಾಧಿಕಾರಿಗಳನ್ನು ನೇಮಕಗೊಳಿಸಿ ದ.ಕ ಜಿಲ್ಲಾ ಬಿಜೆಪಿ ಆದೇಶ ಹೊರಡಿಸಿದೆ.

ಈ ಪೈಕಿ ಪುತ್ತೂರಿನ ರಾಕೇಶ್‌ ರೈ ಕೆಡೆಂಜಿ ಉಪಾಧ್ಯಕ್ಷರಾಗಿ, ಕಿಶೋರ್‌ ಬೊಟ್ಯಾಡಿ, ಯತೀಶ್‌ ಆರ್ವಾರ್‌ ಸುಳ್ಯ ಪ್ರಧಾನ ಕಾರ್ಯದರ್ಶಿಯಾಗಿ, ರಾಜುಗೋಪಾಲ್‌ ರೈ ಜಿಲ್ಲಾ ವಕ್ತಾರರಾಗಿ,ಕಾರ್ಯದರ್ಶಿಯಾಗಿ ವಿದ್ಯಾಗೌರಿ ಕಾರ್ಯದರ್ಶಿಯಾಗಿ, ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಹರೀಶ್‌ ಬಿಜತ್ರೆ ಒಳಮೊಗ್ರು ಆಯ್ಕೆಯಾಗಿದ್ದಾರೆ.ಆದರೆ ಪುತ್ತೂರು ಮಂಡಲ ಅಧ್ಯಕ್ಷ ಮತ್ತು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ಹೆಸರು ಘೋಷಣೆಯಾಗಿಲ್ಲ. ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಸೇರುವ ಕುರಿತು ಮಾತುಕತೆ ಮುಂದುವರಿದಿದ್ದು ಅವರಿಗಾಗಿ ಎರಡರಲ್ಲಿ ಒಂದು ಸ್ಥಾನ ಮೀಸಲಿರಸಲಾಗಿದೆ ಎಂದು ಎನ್ನಲಾಗುತ್ತಿದೆ.ಈ ಕುರಿತು ಸ್ಪಷ್ಟ ಮಾಹಿತಿ ಇನ್ನು ಒಂದು ವಾರದಲ್ಲಿ ಹೊರಬೀಳಲಿದೆ ಎನ್ನಲಾಗಿದೆ.

ಪಕ್ಷ ಬಿಡುಗಡೆ ಮಾಡಿದ ಪಟ್ಟಿ ಇಂತಿದೆ

LEAVE A REPLY

Please enter your comment!
Please enter your name here