ರಾಷ್ಟ್ರ ಮಟ್ಟದ ಕರಾಟೆ ಸ್ವರ್ಧೆಯಲ್ಲಿ ಕೆಪಿಎಸ್ ಕೆಯ್ಯೂರಿನ ವಿಧ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು

0

ಕೆಯ್ಯೂರು: ಶೃಂಗೇರಿ ಕೊಪ್ಪ ಹರಿಹರಪುರ ಶ್ರೀ ಮಠದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆಪಿಎಸ್ ಕೆಯ್ಯೂರಿನ ಹಲವು ವಿದ್ಯಾರ್ಥಿಗಳು ಪ್ರಥಮ ದ್ವಿತೀಯ ತೃತೀಯ ಟ್ರೋಫಿ, ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡರು. ಕೆಪಿಎಸ್‌ ಕೆಯ್ಯೂರು ವಿದ್ಯಾರ್ಥಿಗಳಾದ ಧೃತಿ ಜೆ ರೈ ಕಟಾ ಮತ್ತು ಕಮಿಟೆ ವಿಭಾಗದಲ್ಲಿ ಪ್ರಥಮ, ದ್ವೀತಿಯ ಸ್ಥಾನ, ದೀವಿತ್ ಜೆ ರೈ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಧನುಷ್ ಕಟಾ ಮತ್ತು ಕಮಿಟೆ ವಿಭಾಗದಲ್ಲಿ ಪ್ರಥಮ, ದ್ವೀತಿಯ ಸ್ಥಾನ ಪಡೆದು, ತನುಷ್ ತೃತೀಯ ಸ್ಥಾನ, ಪ್ರಜನ್ ಕಟಾ ಮತ್ತು ಕಮಿಟೆಯಲ್ಲಿ ತೃತೀಯ ಸ್ಥಾನ, ಪ್ರೀತೇಶ್ ಕಟಾ ಮತ್ತು ಕಮಿಟೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನ, ನಿಹಾರಿಕಾ ಕಟಾ ಮತ್ತು ಕಮಿಟೆ ವಿಭಾಗದಲ್ಲಿ ದ್ವೀತಿಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೃದಯಾ ಕಮಿಟೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡರು. ಇವರಿಗೆ ಕರಾಟೆ ಶಿಕ್ಷಕ ಶೇಖರ ಕಂಚಿನಪದವು ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here