ಬಲ್ಯ: ಶ್ರೀ ಉಮಾಮಹೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ-ಹೊರೆಕಾಣಿಕೆ ಸಮರ್ಪಣೆ

0

ಕಡಬ: ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಇಂದು ಬೆಳಿಗ್ಗೆ ಭಕ್ತವೃಂದದವರಿಂದ ಹಸಿರು ಹೊರೆಕಾಣಿಕೆ ಶ್ರೀ ದೇವರಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರವಿಪ್ರಸಾದ್ ಭಟ್ ಪೌರೋಹಿತ್ಯದಲ್ಲಿ ಸಮಾರ್ಪಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ರಾಮಾಚರಣ್ ರೈ ಮಾಣಿಗ, ಕಾರ್ಯದರ್ಶಿ ನಾರಾಯಣ ಎನ್ ಬಲ್ಯ ಕೊಲ್ಲಿಮಾರು, ಕೋಶಾಧಿಕಾರಿ ರಾಜಾರಾಮ್ ಭಟ್ ಹೊಸ್ಮಠ, ಸದಸ್ಯರಾದ ಸತೀಶಚಂದ್ರ ಶೆಟ್ಟಿ ಬೀರುಕ್ಕು, ಕೃಷ್ಣಪ್ಪ ದೇವಾಡಿಗ ಸನಿಲ, ಸರಸ್ವತಿ ರೈ ಪಟ್ಟೆ, ತನಿಯ ಸಂಪಡ್ಕ, ಶಾಂತರಾಮ ರೈ ಬೆದ್ರಡಿ ರಾಮಯ್ಯ ಗೌಡ ಬೈಲಾಡೈ, ತಿಮ್ಮಪ್ಪ ಕರ್ಕೇರ ಮತ್ರಾಡಿ, ಹಾಗೂ ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ದೇವಯ್ಯ ಪನ್ಯಾಡಿ, ಕಾರ್ಯದರ್ಶಿ ಜನಾರ್ಧನ ಗೌಡ ಆರಿಗ ಮತ್ತು ಪದಾಧಿಕಾರಿಗಳು ಹಾಗೂ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯ ಸದಸ್ಯರು, ಗೌರವ ಸಲಹೆಗಾರರು, ಬೈಲುವಾರು ಪ್ರತಿನಿಧಿಗಳು, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಲ್ಯ ಎ ಮತ್ತು ಬಿ ಒಕ್ಕೂಟದ ಸದಸ್ಯರು, ಗ್ರಾಮದ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಹಾಗೂ ಊರ ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ಈ ಹಸಿರುಹೊರೆಕಾಣಿಕೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here