ಕೆದಿಲದಲ್ಲಿ ಜಾಗದ ವಿಚಾರದಲ್ಲಿ ಮಾಜಿ ಯೋಧನ ಪತ್ನಿಗೆ ಹಲ್ಲೆ – ಗಾಯಾಳುವನ್ನು ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು: ಜಾಗದ ವಿಚಾರವಾಗಿ ಯುವಕರ ತಂಡವೊಂದು ಮಾಜಿ ಯೋಧ ಶಿವರಾಮ್ ಭಟ್ ಅವರ ಪತ್ನಿಗೆ ಹಲ್ಲೆ ನಡೆಸಿದ ಘಟನೆ ಕೆದಿಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕೆದಿಲ ಗ್ರಾಮ ಪಂಚಾಯತ್ ಸದಸ್ಯ ಹಬೀಬ್‌ ಹಾಗೂ ತಂಡ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆಂದು ಗಾಯಗೊಂಡ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಆರೋಪಿಸಿದ್ದಾರೆ.

ಆಸ್ಪತ್ರೆಗೆ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾ‌ರ್ ಪುತ್ತಿಲ ಭೇಟಿ ನೀಡಿದ್ದು, ಮಹಿಳೆಗೆ ಹಾಗೂ ಮನೆಯವರಿಗೆ ಧೈರ್ಯ ತುಂಬಿದರು.

LEAVE A REPLY

Please enter your comment!
Please enter your name here