ಮಡ್ಯೂಟ್ಟು ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು :ಈಶ್ವರಮಂಗಲ ಶ್ರೀ ಜುಮಾದಿ, ಶ್ರೀ ಪಂಜುರ್ಲಿ ಮತ್ತು ಪರಿವಾರ ದೈವಗಳ ದೈವಸ್ಥಾನ,ಮಡ್ಯೂಟ್ಟು ತರವಾಡಿನಲ್ಲಿ ನಡೆಯುವ ನೇಮೋತ್ಸವದ ಆಮಂತ್ರಣ ಪತ್ರ ಫೆ.13 ರಂದು ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ನೇಮೋತ್ಸವವು ಏಪ್ರಿಲ್ 19,20, 21 ರಂದು ಪೂರ್ವ ಸಂಪ್ರದಾಯ ವಿಧಿವಿಧಾನಗಳ ಮೂಲಕ ನಡೆಯಲಿದೆ.
ಪುತ್ತೂರು ತಾ.ಸಹಕಾರಿ ಯೂನಿಯನ್ ಇದರ ಅಧ್ಯಕ್ಷರಾದ ಪ್ರವೀಣ್ ರೈ ಮೇನಾಲ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಪೂವಪ್ಪ ಪೂಜಾರಿ ಸಸ್ಪೆಟಿ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here