ಮಂಗಳೂರು ಕಾಂಗ್ರೆಸ್ ಸಮಾವೇಶ:ನೆಕ್ಕಿಲಾಡಿಯಿಂದ ನೂರಾರು ಮಂದಿ ಭಾಗಿ

0

ಉಪ್ಪಿನಂಗಡಿ: ಮಂಗಳೂರಿನಲ್ಲಿ ಫೆ.17ರಂದು ನಡೆದ ಕಾಂಗ್ರೆಸ್ ಸಮಾವೇಶಕ್ಕೆ 34 ನೆಕ್ಕಿಲಾಡಿ ಗ್ರಾಮದಿಂದ ಒಂದು ಬಸ್, ಖಾಸಗಿ ವಾಹನಗಳಲ್ಲಿ ಸುಮಾರು 100ರಷ್ಟು ಕಾರ್ಯಕರ್ತರು ತೆರಳಿದರು.
ಪುತ್ತೂರಿನ ದರ್ಬೆಯಲ್ಲಿರುವ ಶಾಸಕ ಅಶೋಕ್ ಕುಮಾರ್ ರೈಯವರ ರೈ ಎಸ್ಟೇಟ್ ಚಾರಿಟೇಬಲ್ ಆಂಡ್ ಎಜ್ಯುಕೇಷನಲ್ ಟ್ರಸ್ಟ್‌ನ ಕಚೇರಿ ಬಳಿ ಸೇರಿದ ಕಾರ್ಯಕರ್ತರೆಲ್ಲಾ ಬಳಿಕ ಒಟ್ಟಾಗಿ ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಈ ಸಂದರ್ಭ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಕಾರ್ಯದರ್ಶಿ ಕಲಂದರ್ ಶಾಫಿ, ಕಾಂಗ್ರೆಸ್‌ನ ಬೂತ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಖಾದರ್, ಹಮೀದ್ ಪಿ.ಟಿ., ಇಸಾಕ್, ಪ್ರಮುಖರಾದ ಡಾ. ರಘು ಬೆಳ್ಳಿಪ್ಪಾಡಿ, ರಾಧಾಕೃಷ್ಣ ನಾಕ್, ರೂಪೇಶ್ ರೈ ಅಲಿಮಾರ್, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಅಭಿಷೇಕ್ ಬೆಳ್ಳಿಪ್ಪಾಡಿ, ಅಶೋಕ ನಾಯಕ್, ವೆಂಕಪ್ಪ, ಪೊನ್ನಕ್ಕ, ರವಿ, ಲೀಲಾ, ಭವಾನಿ, ಉಷಾ, ಅರುಣ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here