ಅನಾರೋಗ್ಯದಲ್ಲಿರುವ ಟೈಲರ್ ಆರ್.ಪಿ ಜಯದೇವ್ ನಾಯಕ್‌ರವರಿಗೆ ಕೆ.ಎಸ್.ಟಿ.ಎ ಪುತ್ತೂರು ಸಮಿತಿಯಿಂದ ಧನಸಹಾಯ

0

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಪುರುಷರಕಟ್ಟೆ ಕೂಡುರಸ್ತೆ ನಿವಾಸಿ ಟೈಲರ್ ವೃತ್ತಿ ಮಾಡುತ್ತಿರುವ ಆರ್.ಪಿ ಜಯದೇವ್ ನಾಯಕ್ ರವರಿಗೆ ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ಪುತ್ತೂರು ಸಮಿತಿ ವತಿಯಿಂದ ರೂ.21,500 ನಗದನ್ನು ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು.

ಟೈಲರ್ ಎಸೋಸಿಯೇಶನ್ ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ ಯು. ನಾೖಕ್, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಯಶೋಧರ ಜೈನ್ ದರ್ಬೆ, ರಾಜ್ಯ ಸಮಿತಿ ಲೆಕ್ಕಪರಿಶೋಧಕ ರಘುನಾಥ್ ಬಿ ಪುತ್ತೂರು, ನಿಕಟಪೂರ್ವ ಜಿಲ್ಲಾಧ್ಯಕ್ಷ ಜಯಂತ್ ಉರ್ಲಾಂಡಿ, ನಗರ ವಲಯ ಅಧ್ಯಕ್ಷ ದಿನೇಶ್ ಸಂಪ್ಯ, ನಗರವಲಯ ಕಾರ್ಯದರ್ಶಿ ಆಶಾ ಕಲ್ಲಾರೆ, ಚಂದ್ರಿಕಾ ನಾಗೇಂದ್ರ ಆಚಾರ್ಯ ಬೀರಮಲೆ, ವಿಲ್ಮಾ ಕ್ರಾಸ್ತಾ ದರ್ಬೆ, ಗುಲಾಬಿ ಟೈಲರ್ ಪುತ್ತೂರು, ಭಾರತಿ ಹರೀಶ್ ಎಳ್ಮುಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here