ಕಡಬ: ಕಂಗುಳೆ ಬೊಮ್ಮಕ್ಕ ಮಾಯಿಲಪ್ಪ ಗೌಡರವರ ಶ್ರದ್ಧಾಂಜಲಿ ಸಭೆ

0

ಕಡಬ: ಫೆ.3ರಂದು ನಿಧನರಾದ ಕಡಬ ಗ್ರಾಮದ ಪಿಜಕ್ಕಳ ಕಂಗುಳೆ ನಿವಾಸಿ ಬೊಮ್ಮಕ್ಕ ಮಾಯಿಲಪ್ಪ ಗೌಡರವರ ಶ್ರದ್ಧಾಂಜಲಿ ಸಭೆ ಫೆ.19ರಂದು ಕಡಬ ಗ್ರಾಮದ ಪಿಜಕ್ಕಳ ಕಂಗುಳೆ ಮನೆಯಲ್ಲಿ ನಡೆಯಿತು.


ನಿವೃತ್ತ ಶಿಕ್ಷಕ ಸುಂದರ ಗೌಡ ಅವರು ಮಾತನಾಡಿ, ಮೃತ ಬೊಮ್ಮಕ್ಕರವರು ಸಮಾಜಕ್ಕೆ ಮತ್ತು ಕುಟುಂಬಕ್ಕೆ ಮಾದರಿ ಮಹಿಳೆಯಾಗಿದ್ದರು ಎಂದು ಗುಣಗಾನ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಕಡಬ ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಪ್ರಶಾಂತ್ ಶಿವತ್ತಮಠ ಡೆಂಬೆಲೆ, ರಶ್ಮಿದಾಮೋದರ ಗೌಡ ಕನಜಾಲು, ಜೀವನ್ ಪ್ರಕಾಶ್, ಹರಿಯಪ್ಪ ಗೌಡ ಗೊಡಾಲು, ಕಡಬದ ಉದ್ಯಮಿ ಸುಂದರ ಗೌಡ ಮಂಡೆಕ್ಕರ, ನಿವೃತ್ತ ಸೈನಿಕ ಸುಂದರ ಗೌಡ ಅಂಗಣ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಪುಟ್ಟಣ್ಣ ಗೌಡ ಕಲ್ಲರ್ಪೆ, ನವೀನ್ ಕುಮಾರ್ ಕರಿಯಾಲು ಕಿಲ್ಲೂರು, ರಾಜೇಶ ಕರಿಯಾಲು, ಲಕ್ಷ್ಮಣ ಗೌಡ ಕರಿಯಾಲು, ರೇಗಪ್ಪ ಗೌಡ ಕಲ್ಲೇರಿ, ನಾಗಪ್ಪ ಗೌಡ ಬನ್ನೂರು, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಸಂಜೀವ ಗೌಡ ಕಕ್ಕೆಪದವು, ಶಿವರಾಮ ಗೌಡ ಹಿರೇಬಂಡಾಡಿ, ಜಯವಸಂತ ಗೌಡ ಬಲ್ಪ ಜತ್ತಿಲ, ಅಣ್ಣು ಗೌಡ ಶಿವತ್ತಮಠ ಡೆಂಬಲೆ, ಶಿಕ್ಷಕರಾದ ಸಂದೇಶ ಅಗ್ಪೆಲಾ, ಚಂದ್ರಶೇಖರ ಗೌಡ ಕಿರಿಭಾಗ, ರವಿ ಕೋನಡ್ಕ, ನಿವೃತ್ತ ಶಿಕ್ಷಕಿ ರುಕ್ಮಿಣಿ, ಕೃಷಿಕ ಕೊರಗಪ್ಪ ಗೌಡ ಕಲ್ಲರ್ಪೆ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿ ಬಾಲಕೃಷ್ಣ ಜಿ, ನಿವೃತ್ತ ಶಿಕ್ಷಕ ಪೂವಪ್ಪ ಗೌಡ, ನಿವೃತ್ತ ಪೋಲೀಸ್ ಮೀಸಲು ಪಡೆ ಕಾನ್ಸ್‌ಟೇಬಲ್ ಬೆಳಿಯಪ್ಪ ಗೌಡ, ಪದ್ಮಯ್ಯ ಗೌಡ ವಲಚ್ಚಿಲ್ ಪಿಜಕ್ಕಳ, ಲಲಿತಾ ಕೋನಡ್ಕ, ದೇವಕಿ ಸುಬ್ರಾಯ ಗೌಡ ಕೋಂಕ್ಯಾಡಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಪಿ, ವಸಂತ ಮರಕ್ಕಡ, ಸುಧಾಕರ ಪುತ್ತೂರು, ಚಿದಾನಂದ ಗೌಡ ಕಾಪಜಾಲು, ಮಂಜುನಾಥ ಗೌಡ ಮುದ್ವ, ಗಂಗಾಧರ ಗೌಡ ಮುದ್ವ, ಕುಸುಮಾಧರ ಕಾಪಜಾಲು, ಪ್ರಕಾಶ ಗೌಡ ವೇಣೂರು, ಮಹೇಶ ದೊಡ್ಡಹಿತ್ಲು, ಲಕ್ಷಣ ಗೌಡ ಕರಿಯಾಲು, ಕೂಸಮ್ಮ ಸುಂದರ ಗೌಡ ಮದೆಪರ್ಲ ಬಿಳಿನೆಲೆ, ಕೃಷ್ಣಪ್ಪ ಗೌಡ ಮಣಿಕ್ಕಳ, ಭವ್ಯಲೋಕೇಶ್ ಪಿಜಕ್ಕಳ, ನವೀನ ಕಬಕ, ಆನಂದ ಗೌಡ ವಲಚಿಲ್, ಪುರಂದರ ರೈ ಪಿಜಕ್ಕಳ, ಅಜಿತ್ ರೈ ಆರ್ತಿಲ, ಕಡಬ ಕಂದಾಯ ಇಲಾಖೆ ನಾಡಕಚೇರಿ ಆಡಳಿತಾಧಿಕಾರಿ ಸವಿತಾ, ಮಾಜಿ ಸೈನಿಕ ಜತ್ತಪ್ಪ ಗೌಡ ಪಂಜ, ಗುತ್ತಿಗಾರು ಗ್ರಾಮ ಆಡಳಿತಾಧಿಕಾರಿ ಭಾರತಿ ಸುಜನ್ ಹರಿಹರ, ದೈಹಿಕ ಶಿಕ್ಷಣ ಶಿಕ್ಷಕ ಆನಂದ ಗೌಡ, ಸತೀಶ್ಚಂದ್ರ ಅತ್ರಿಜಾಲು, ರಾಮಣ್ಣ ಗೌಡ ಗೊಡಾಲು, ಯತೀಂದ್ರ ಗೌಡ ಗೊಡಾಲು, ಮೋಹನ ಗೌಡ ಗೊಡಾಲು, ಶಿಕ್ಷಕರಾದ ಪುರಂದರ ಗೌಡ ನೆಲ್ಯಾಡಿ, ಮಾಜಿ ಸೈನಿಕ ಶಿವರಾಮ ಹಿರೇಬಂಡಾಡಿ, ಮಾಜಿ ಸೈನಿಕ ಸುನಿಲ್ ಪೇರಡ್ಕ. ಸಂತೋಷ್ ರೈ ಪಿಜಕ್ಕಳ ಸೇರಿದಂತೆ ಹಲವು ಮಂದಿ ಗಣ್ಯರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


ಮೃತರ ಮಕ್ಕಳಾದ ಮಾಜಿ ಸೈನಿಕ ಸುಂದರ ಗೌಡ, ಕುಶಾಲಪ್ಪ ಗೌಡ, ಪುತ್ರಿಯರಾದ ಮೋಹಿನಿ, ಗಂಗಮ್ಮ, ವಾರಿಜ, ಸವಿತಾ(ಸೇಸಮ್ಮ), ಸೊಸೆಯಂದಿರಾದ ರಾಜರತ್ನ ಸುಂದರ ಗೌಡ, ದೇವಕಿ ಕುಶಾಲಪ್ಪ ಗೌಡ, ಮೊಮ್ಮಕ್ಕಳಾದ ಲೋಕೇಶ್, ನವನೀತ್ ಪಿ.ಎಸ್, ಅಂಕಿತಾ ಪಿ.ಎಸ್.ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here