ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲದಯಲ್ಲಿ ಅವಭೃತೋತ್ಸವ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ಸೋಮವಾರ ಅಭಿಷೇಕ ಬಳಿಕ ಅವಭೃತೋತ್ಸವ ನಡೆದು ಮಧ್ಯಾಹ್ನ ಧ್ವಜ ಅವರೋಹಣ, ಯಜ್ಞ ಮಂಟಪ ವಿಸರ್ಜನೆ ಕಾರ್ಯಕ್ರಮ ಜರಗಿತು.


ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಡಾ.ಯಂ.ಆರ್.ಶೆಣೈ, ಯು.ನಾಗರಾಜ ಭಟ್, ದೇವಿದಾಸ ಭಟ್, ಕೆ.ಅನಂತರಾಯ ಕಿಣಿ ಪ್ರಮುಖರಾದ ಕರಾಯ ರಾಮಚಂದ್ರ ನಾಯಕ್, ಎಚ್. ವಾಸುದೇವ ಪ್ರಭು, ಕರಾಯ ಗಣೇಶ ನಾಯಕ್, ಕರಾಯ ಸತೀಶ ನಾಯಕ್, ಕರಾಯ ರಾಘವೇಂದ್ರ ನಾಯಕ್, ಕರಾಯ ನರಸಿಂಹ ನಾಯಕ್, ಕೆ.ಸುರೇಶ್ ಕಿಣಿ, ಕೆ.ಗಣೇಶ ಭಟ್, ಪ್ರದೀಪ ನಾಯಕ್, ಕೇಪುಳು ರಾಜೇಶ ನಾಯಕ್, ನೀನಿ ಸಂತೋಷ ಕಾಮತ್, ನ್ಯಾಯವಾದಿ ರಮೇಶ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಅರ್ಚಕರಾದ ರವೀಂದ್ರ ಭಟ್, ನರಸಿಂಹ ಭಟ್, ಸಂದೀಪ್ ಭಟ್, ಸುಬ್ರಹ್ಮಣ್ಯ ಭಟ್, ಎಸ್.ಶ್ರೀನಿವಾಸ ಭಟ್ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here