ಕಾವೇರಿಕಟ್ಟೆಯಲ್ಲಿ ಹೊಟೇಲ್ ಸಾಯಿ ಕೆಫೆ ಶುಭಾರಂಭ

0

ಪುತ್ತೂರು: ಇಲ್ಲಿನ ದರ್ಬೆ ಕಾವೇರಿಕಟ್ಟೆ ಬಳಿಯ ಸಾಜ ಸಂಕೀರ್ಣದಲ್ಲಿ ಭವಿತ್ ಕೃಷ್ಣ ಹಾಗೂ ಸುದೀಂದ್ರ ರಾಜ್ ಇವರ ಪಾಲುದಾರಿಕೆಯಲ್ಲಿ ಹೊಟೇಲ್ ಸಾಯಿ ಕೃಷ್ಣ ಫೆ.22ರಂದು ಶುಭಾರಂಭಗೊಂಡಿತು.

ಉದ್ಯಮಿ ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ನೂತನ ಕೆಫೆ ಉದ್ಘಾಟಿಸಿ, ಹಾರೈಸಿದರು. ನಗರಸಭಾ ಸದಸ್ಯರಾದ ಪ್ರೇಮ್ ಕುಮಾರ್ ಮತ್ತು ಪದ್ಮನಾಭ ನಾಯ್ಕ್ ,ಪವನ್ ಕುಮಾರ್ ಕುಂಜೂರು ಪಂಜ ಹಾಗೂ ಪ್ರಜ್ಞಾ ಆಶ್ರಮದ ಇನ್‌ಚಾರ್ಜ್ ಅಣ್ಣಪ್ಪ ಮತ್ತು ಆಶ್ರಮದ ಬೌದ್ಧಿಕ ಭಿನ್ನ ಸಾಮರ್ಥ್ಯದ ಯುವಕರು ಸಹಿತ ಪಾಲುದಾರ ಭವಿತ್ ಕೃಷ್ಣರವರ ತಂದೆ ಕೃಷ್ಣ ಬಿ.ಎನ್ , ಇನ್ನೋರ್ವ ಪಾಲುದಾರ ಸುಧೀಂದ್ರ ರಾಜ್ ಹೆತ್ತವರು ಸಂಧ್ಯಾ ನಾಗರಾಜ್ ದಂಪತಿ ಉಪಸ್ಥಿತರಿದ್ದರು. ನೂತನ ಕೆಫೆಯಲ್ಲಿ ಕರಾವಳಿ ಖಾದ್ಯ, ಚೈನೀಸ್, ಫಿಝಾ, ಬರ್ಗರ್, ಸ್ಯಾಂಡ್ವಿಚ್, ಜ್ಯೂಸ್, ಐಸ್ ಕ್ರೀಂ ಮತ್ತು ಗಂಜಿ ಊಟ ಕೂಡ ಸಿಗಲಿದ್ದು , ಗ್ರಾಹಕರೆಲ್ಲರೂ ಸಹಕಾರ ನೀಡುವಂತೆ ಸಂಸ್ಥೆ ಪಾಲುದಾರರು ವಿನಂತಿಸಿದರು.

ಶುಭಾರಂಭದ ಸಲುವಾಗಿ ಉಚಿತ ಊಟದ ವ್ಯವಸ್ಥೆ…
ನೂತನ ಕೆಫೆ ಪ್ರಾರಂಬಿಸಿರುವ ಹಿನ್ನೆಲೆಯಲ್ಲಿ ಪ್ರಜ್ಞಾ ಆಶ್ರಮದಲ್ಲಿ ಫೆ.22ರ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆಯನ್ನು ಬೌದ್ಧಿಕ ಭಿನ್ನ ಸಾಮರ್ಥ್ಯದ ಯುವಕರಿಗೆ ಪಾಲುದಾರರಾದ ಸುಧೀಂದ್ರ ರಾಜ್ ಮತ್ತು ಭವಿತ್ ಕೃಷ್ಣ ಆಯೋಜನೆ ಮಾಡಿ , ಮಾದರಿ ಎನಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here