ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಶೀನಪ್ಪ ಪೂಜಾರಿ

0

ಉಪ್ಪಿನಂಗಡಿ: ಮೂರ್ತೆದಾರರ ಸೇವಾ ಸಹಕಾರ ಸಂಘ ಉಪ್ಪಿನಂಗಡಿ ಇದರ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಶೀನಪ್ಪ ಪೂಜಾರಿ ಹೂವಿನಮಜಲು ಆಯ್ಕೆಯಾಗಿದ್ದಾರೆ.
ಫೆ. 5 ರಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದ್ದು, ಚುನಾವಣಾ ಪ್ರಕ್ರಿಯೆಯನ್ನು ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ನಡೆಸಿಕೊಟ್ಟರು.

ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ನಿರ್ದೇಶಕರಾದ ಡಾ. ರಾಜಾರಾಮ ಕೆ .ಬಿ., ಮಾಧವ ಪೂಜಾರಿ ಆರಿಜಾಲು, ಶಶಿಧರ ಪಠೇರಿ, ಚಂದ್ರಶೇಖರ ಬಾಣಜಾಲು, ಚೆನ್ನಪ್ಪ ಪೂಜಾರಿ ಕೊಚ್ಚಿಲ, ಶ್ರೀಮತಿ ಚಂದ್ರಕಲಾ ಸದಾನಂದ ಡಿ.ಎಸ್., ಶ್ರೀಮತಿ ಸುನಿತಾ ಸೋಮಸುಂದರ ಕೊಡಿಪಾನ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡೀಕಯ್ಯ ಜಿ. ಮತ್ತು ಸಿಬ್ಬಂದಿ ವರ್ಗ ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here