ಪೆರ್ಲಂಪಾಡಿಯಲ್ಲಿ ಶಾಸ್ತ ಸ್ವೀಟ್ಸ್ ಬೇಕರಿ ಶುಭಾರಂಭ

0

ಪುತ್ತೂರು: ಪೆರ್ಲಂಪಾಡಿ ಅಂಬೇಡ್ಕರ್ ಭವನದ ಬಳಿಯಿರುವ ಪ್ರವೀಣ್ ಕಾಂಪ್ಲೆಕ್ಸ್‌ನಲ್ಲಿ ಫೆ.22ರಂದು ಶಾಸ್ತ ಸ್ವೀಟ್ಸ್ ಬೇಕರಿ ಶುಭಾರಂಭಗೊಂಡಿತು.ಹಿರಿಯರಾದ ಶ್ರೀಮತಿ ಶೀಲಾವತಿ ಪಂಚೋಡಿ ರಿಬ್ಬನ್ ಬಿಡಿಸುವ ಮೂಲಕ‌ ಉದ್ಘಾಟಿಸಿದರು.ಕೊಳ್ತಿಗೆ ಗ್ರಾ.ಪಂ. ಉಪಾಧ್ಯಕ್ಷ ಪ್ರಮೋದ್ ಕೆ.ಎಸ್.ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಯು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿ ಎಂದು ಶುಭಹಾರೈಸಿದರು.

ಕೊಳ್ತಿಗೆ ಗ್ರಾ.ಪಂ. ಸದಸ್ಯರಾದ ವಸಂತ್ ಕುಮಾರ್ ರೈ, ಪವನ್ ಕುಮಾರ್, ಪ್ರಾ.ಕ್ರ ಸಹಕಾರಿ‌ ಸಂಘದ ಅದ್ಯಕ್ಷ ವೆಂಕಟರಮಣ ಕೆ.ಎಸ್, ಕಟ್ಟಪುಣಿ, ನಿರ್ದೇಶಕರುಗಳಾದ ತೀರ್ಥಾನಂದ ದುಗ್ಗಳ, ಸತೀಶ್ ಪಾಂಬಾರು, ಪೆರ್ಲಂಪಾಡಿ ಷಣ್ಮುಖದೇವ ಪ್ರೌಡಶಾಲೆಯ ಸಂಚಾಲಕ ಶಿವರಾಮ ಭಟ್ ಬೀರ್ನಕಜೆ, ಪೆರ್ಲಂಪಾಡಿ ಶ್ರೀಗಣೇಶ್ ಮೆಡಿಕಲ್ಸ್ ಮಾಲಕ ದಿನೇಶ್ ಪಿ.ಕೆ., ಕಟ್ಟಡದ ಮಾಲಕ ಪಳನಿಮುತ್ತು ಪೆರ್ಲಂಪಾಡಿ, ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು. ಅಜ್ಜಿನಡ್ಕ ಸ.ಹಿ.ಪ್ರಾ ಶಾಲಾ‌ ನಿವೃತ್ತ ಶಿಕ್ಷಕ ಬಾಬು ನಾಯ್ಕ ಸ್ವಾಗತಿಸಿದರು.


ಮಾಲಕ ಸ್ವಸ್ತಿಕ್ ಮಾತನಾಡಿ ನಮ್ಮಲ್ಲೇ ತಯಾರಿಸಿದ ವಿವಿಧ ಬಗೆಯ ಸ್ವಾದಿಷ್ಟಕರ ಶುಚಿ-ರುಚಿಯಾದ ತಿಂಡಿ ತಿನಿಸುಗಳು‌, ಶುಭ ಸಮಾರಂಭಗಳಿಗೆ ಬೇಕಾದ ವಿವಿಧ ಬಗೆಯ ತಿಂಡಿ ತಿನಿಸು ಹಾಗೂ ಕೇಕ್‌ಗಳನ್ನು ಕ್ಲಪ್ತ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲಾಗುವುದು ಎಂದು ಹೇಳಿ ಗ್ರಾಹಕರ ಸಹಕಾರ ಕೋರಿ ಸ್ಮರಣಿಕೆ ನೀಡಿ ವಂದಿಸಿದರು. ಮಾಲಕರ ತಂದೆ ಮಂಗಳೂರು ನಿವೃತ್ತ ರರ್ಲ್ವೆ ಉದ್ಯೋಗಿ ರಮೇಶ ನಾಯ್ಕ್, ಮಾರ್ತಶ್ರೀ ಶ್ರೀಮತಿ ಲಕ್ಷ್ಮಿ, ಪತ್ನಿ ಸಂಧ್ಯಾ ಉಪಸ್ಥಿತರಿದ್ದರು.


ನಿತಿನ್ ತಲೆಬಯಿಲು, ಅಕ್ಷಿತ್, ಚಂದ್ರಶೇಖರ ಈಶ್ವರಮಂಗಲ, ಶಶಿಕಿರಣ್, ನಿತಿನ್ ಬೆಳ್ಳಿಚಡವು, ವಿಷ್ಣುರಾಜ್, ಚೇತನ್, ಪ್ರಶಾಂತ್ ಪಳನೀರು, ಶ್ರೀಕಾಂತ್ ಬೆಳ್ಳಿಚಡವು ಮತ್ತು ಈಶ್ವರಮಂಗಲ ಶಾಸ್ತ ಫ್ಯೂಯಲ್ಸ್ ನ ಸಿಬ್ಬಂದಿ ಬಳಗ ಸಹಕರಿಸಿದರು.

LEAVE A REPLY

Please enter your comment!
Please enter your name here