ಮಾಜಿ ಸೈನಿಕರ ಭವನದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

0

ಪುತ್ತೂರು: ಇಲ್ಲಿನ ಮಿನಿ ವಿಧಾನಸೌಧದ ಬಳಿಯಲ್ಲಿ ಕಾರ್ಯಾಚರಿಸುತ್ತಿರುವ ಮಾಜಿ ಸೈನಿಕರ ಸಂಘದ ಮುಂದುವರೆದ ಭಾಗವಾಗಿ ಪಕ್ಕದಲ್ಲಿಯೇ ನೂತನ ಕಟ್ಟಡದ ಶಂಕುಸ್ಥಾಪನೆಯು ಫೆ.24 ರಂದು ಬೆಳಿಗ್ಗೆ ನೆರವೇರಿತು.

ಶಂಕುಸ್ಥಾಪನೆ ಮೊದಲು ಪಕ್ಕದಲ್ಲಿ ಇರುವ ನಾಗನ ಕಟ್ಟೆಯಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕ ಭವನ ಟ್ರಸ್ಟ್ ಇದರ ಮ್ಯಾನೇಜಿಂಗ್ ಟ್ರಸ್ಟಿ ಜ್ಯೋ ಡಿ”ಸೋಜ, ಕಾರ್ಯದರ್ಶಿ ದಯಾನಂದ ಕೆ.ಎಸ್, ಕೋಶಾಧಿಕಾರಿ ಶ್ರೀರಂಗ ಶಾಸ್ತ್ರಿ ಮಣಿಲ ಹಾಗೂ ಸದಸ್ಯರು, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ ನಾರಾಯಣ ಭಟ್, ಕಾರ್ಯದರ್ಶಿ ನಾಗಪ್ಪ ಗೌಡ ಹಾಗೂ ಸದಸ್ಯರು, ಮಾಜಿ ಸೇನಾಧಿಕಾರಿಗಳಾದ ಲೆ|ಕರ್ನಲ್ ಜಿ.ಡಿ ಭಟ್, ಲೆ|ಟಿ.ರಮಾಕಾಂತ್, ಇಂಜಿನಿಯರ್ ಅವಿಲ್ ಸೆರಾವೋ, ಈಶಾವಾಸ್ ಅಸೋಸಿಯೇಟ್ಸ್ ಪುತ್ತೂರು ಇದರ ಇಂಜಿನಿಯರ್ ಗಳಾದ ಈಶಾನ್ಯ ಹಾಗೂ ಶಿವಶಂಕರ್ ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here