ಯಕ್ಷಗಾನ ಕಲಾವಿದ ಜಾಲ್ಮನೆ ದಿ.ಬಾಬು ಆಚಾರ್ಯ ಗೋಣಿಗುಡ್ಡೆರವರ ಸಂಸ್ಮರಣೆ-ಯಕ್ಷಗಾನ ತಾಳಮದ್ದಲೆ

0

ನೆಲ್ಯಾಡಿ: ಯಕ್ಷಗಾನ ಹಿರಿಯ ಕಲಾವಿದ, ಜಾಲ್ಮನೆ ಕುಟುಂಬದ ಹಿರಿಯರೂ ಆದ ದಿ.ಬಾಬು ಆಚಾರ್ಯ ಗೋಣಿಗುಡ್ಡೆರವರ ಉತ್ತರಕ್ರಿಯೆಯ ಪ್ರಯುಕ್ತ ಶ್ರೀ ಕಾಳಿಕಾಂಬ ಭಜನಾ ಮಂದಿರದಲ್ಲಿ ಸಮಾರಾಧನೆ, ಸಂಸ್ಮರಣೆ ಮತ್ತು ಯಕ್ಷಗಾನ ತಾಳಮದ್ದಲೆ ನಡೆಯಿತು.

ಸಮಾರಾಧನೆಯ ಬಳಿಕ ನಡೆದ ಸಂಸ್ಮರಣ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದ ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರು ಮಾತನಾಡಿ, ಹಿರಿಯ ಭಾಗವತರಾಗಿದ್ದ ದಿ.ಬಾಬು ಆಚಾರ್ಯರವರು ನಿಷ್ಕಳಂಕ ಮನಸ್ಸಿನ, ಎಲ್ಲರನ್ನೂ ಪ್ರೀತಿಸುವ ಸ್ನೇಹಜೀವಿಯಾಗಿದ್ದರು. ಯಕ್ಷಗಾನದ ಬಗ್ಗೆ ಅಪರಿಮಿತ ಪ್ರೀತಿಯನ್ನು ಹೊಂದಿದ್ದರು. ಕಾಳಿಕಾಂಬ ಭಜನಾ ಮಂದಿರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಜಾತಿ, ಮತ, ಧರ್ಮ ಮೀರಿ ಎಲ್ಲರ ಪ್ರೀತಿ-ವಿಶ್ವಾಸಗಳನ್ನು ಗಳಿಸಿದ್ದರು. ಅವರ ದಿವ್ಯಾತ್ಮಕ್ಕೆ ಶಾಂತಿ ಸಿಗಲಿ, ಅವರಿಗೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಶವ ಆಚಾರ್ಯ ಜಾಲ್ಮನೆ, ದಯಾನಂದ ಆಚಾರ್ಯ ವಾಣಿಶ್ರೀ, ಕೊಲ್ಯೊಟ್ಟು ರಾಮಣ್ಣ ಆಚಾರ್ಯ, ಉಪ್ಪಿನಂಗಡಿ ಕಾಳಿಕಾಂಬ ಯಕ್ಷಗಾನ ಮಂಡಳಿಯ ಹರೀಶ್ ಆಚಾರ್ಯ, ಬಲ್ಯ ರಾಮನಗರ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಯರಾಮ ಗೌಡ ನಾಲ್ಗುತ್ತು, ಕಾರ್ಯದರ್ಶಿ ಕಿರಣ್ ಗೌಡ ಪುತ್ತಿಲ, ಮದ್ದಳೆ ವಾದಕ ಜಯಪ್ರಕಾಶ್ ಬಾಲ್ತಿಲ್ಲಾಯ ಕೊಕ್ಕಡ, ಯಕ್ಷಗಾನ ಭಾಗವತರಾದ ಕುಸುಮಕರ ಆಚಾರ್ಯ ಹಳೆನೆರಂಕಿ, ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ ಹಳೆನೇರಂಕಿ, ಪ್ರಗತಿಪರ ಕೃಷಿಕ ರಮೇಶ್ ಗೌಡ ನಾಲ್ಗುತ್ತು, ಧಾರ್ಮಿಕ ಮುಖಂಡ ಧನಂಜಯ ಗೌಡ ಕೊಡಂಗೆ, ಶ್ರೀ ವಿನಾಯಕ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಅಮ್ಮಿ ಗೌಡ ನಾಲ್ಗುತ್ತು, ದಿ.ಬಾಬು ಆಚಾರ್ಯರವರ ಅಳಿಯ ನಾರಾಯಣ ಆಚಾರ್ಯ ಗೋಣಿಗುಡ್ಡೆ, ಕಾಳಿಕಾಂಬ ಭಜನಾ ಮಂಡಳಿಯ ಪದಾಧಿಕಾರಿಗಳಾದ ಮಾಧವ ಆಚಾರ್ಯ ಜಾಲ್ಮನೆ, ಅಶೋಕ ಆಚಾರ್ಯ ಜಾಲ್ಮನೆ, ಖ್ಯಾತ ಯಕ್ಷಗಾನ ಕಲಾವಿದ ತಿಮ್ಮಪ್ಪ ಗೌಡ, ಯಶೋಧರ ಗೌಡ ನಾಲ್ಗುತ್ತು, ದಿ.ಬಾಬು ಆಚಾರ್ಯರವರ ಮಕ್ಕಳು, ಮೊಮ್ಮಕ್ಕಳು, ಜಾಲ್ಮನೆ ಕುಟುಂಬಸ್ಥರು ಭಾಗವಹಿಸಿದ್ದರು.

ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಯರಾಮ ಗೌಡ ಸ್ವಾಗತಿಸಿದರು. ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಮಂಡಳಿ ಕೋಶಾಧಿಕಾರಿ ಹರೀಶ್ ಆಚಾರ್ಯ ವಂದಿಸಿದರು. ನಂತರ ವಿನಾಯಕ ಯಕ್ಷಗಾನ ಮಂಡಳಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಲೆ ‘ಸುಧನ್ವ ಮೋಕ್ಷ’ ಯಕ್ಷಗಾನ ನಡೆಯಿತು. ಹಿಮ್ಮೇಳದಲ್ಲಿ ಕುಸುಮಕರ ಆಚಾರ್ಯ ಹಳೆನೇರೆಂಕಿ, ಅಮ್ಮಿ ಗೌಡ ನಾಲ್ಗುತ್ತು, ಮದ್ದಳೆ ವಾದಕರಾಗಿ ಜಯಪ್ರಕಾಶ್ ಬಾಳ್ತಿಲ್ಲಾಯ, ಚೆಂಡೆ ವಾದಕರಾಗಿ ದಿವಾಕರ ಆಚಾರ್ಯ ಸಹಕರಿಸಿದರು. ಮುಮ್ಮೇಳದಲ್ಲಿ ಹಂಸಧ್ವಜನಾಗಿ ಗಂಗಾಧರ ಶೆಟ್ಟಿ ಹೊಸಮನೆ, ಸುಧನ್ವನಾಗಿ ಕಿರಣ್ ಗೌಡ ಪುತ್ತಿಲ, ಹರೀಶ್ ಆಚಾರ್ಯ ಉಪ್ಪಿನಂಗಡಿ, ಶ್ರೀಕೃಷ್ಣನಾಗಿ ಜಯರಾಮ ಗೌಡ ನಾಲ್ಗುತ್ತು, ಅರ್ಜುನನಾಗಿ ತಿಮ್ಮಪ್ಪ ಗೌಡ ಪುಳಿತಡಿ, ಶಂಖಾಲಿಖಿತರಾಗಿ ಅಮ್ಮಿ ಗೌಡ, ಜಯರಾಮ್ ಗೌಡ, ಪ್ರಭಾವತಿಯಾಗಿ ದಿವಾಕರ ಆಚಾರ್ಯ ಹಳೆನೇರಂಕಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here