ಬಿಲ್ವಗಿರಿ: ‘ಜೈ ಶ್ರೀರಾಮ’ ಯಕ್ಷಗಾನ

0

ಬೆಟ್ಟಂಪಾಡಿ: ಯಕ್ಷಗಾನ ಬಯಲಾಟ ಸೇವಾ ಸಮಿತಿ ಬೆಟ್ಟಂಪಾಡಿ ಇದರ ವತಿಯಿಂದ 39ನೇ ವರ್ಷದ ಹತ್ತು ಸಮಸ್ತರ ಸೇವಾರ್ಥವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಜೈ ಶ್ರೀರಾಮ’ ಎಂಬ ಪೌರಾಣಿಕ ಕಥಾಭಾಗದ ಯಕ್ಷಗಾನ ಬಯಲಾಟವು ಫೆ. 25 ರಂದು ಬೆಟ್ಟಂಪಾಡಿ ಬಿಲ್ವಗಿರಿಯಲ್ಲಿ ಜರಗಿತು.

ಅಪರಾಹ್ನ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಬಿಲ್ವಗಿರಿಗೆ ಶ್ರೀದೇವಿಯ ಶೋಭಾಯಾತ್ರೆಯು ನಡೆಯಿತು‌.  ಸಂಜೆ ಚೌಕಿಪೂಜೆ ನಡೆದು, ರಾತ್ರಿ ಅನ್ನಸಂತರ್ಪಣೆ ನೆರವೇರಿತು. 2 ಸಾವಿರಕ್ಕೂ ಮಿಕ್ಕಿ ಭಕ್ತಾಭಿಮಾನಿಗಳು ಅನ್ನಪ್ರಸಾದ ಸ್ವೀಕರಿಸಿದರು. ಈ ವೇಳೆ ಸಮಿತಿಯ ಅಧ್ಯಕ್ಷ ಡಾ.ಶ್ರೀಕೃಷ್ಣ ಭಟ್, ಕಾರ್ಯದರ್ಶಿ ಅರುಣ್ ಪ್ರಕಾಶ್ ರೈ ಮದಕ, ಕೋಶಾಧಿಕಾರಿ ಉಮೇಶ್ ಮಿತ್ತಡ್ಕ, ಮಾಜಿ ಕಾರ್ಯದರ್ಶಿ ಬಿ. ವಿಷ್ಣುರಾವ್, ಮಾಜಿ ಕೋಶಾಧಿಕಾರಿ ಮೋನಪ್ಪ ಗೌಡ ಮಿತ್ತಡ್ಕ, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಭಕ್ತಾಭಿಮಾನಿಗಳು ದೇವರ ಪ್ರಸಾದ ಸ್ವೀಕರಿಸಿದರು. 

LEAVE A REPLY

Please enter your comment!
Please enter your name here