ದರ್ಬೆತ್ತಡ್ಕ: ಬಾಬು ಕುರುಂಜ ದೇವಗಿರಿಯವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚಿಗೆ ನಿಧನ ಹೊಂದಿದ ದರ್ಬೆತ್ತಡ್ಕ ಸರಕಾರಿ ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಾಬು ಕುರುಂಜ ದೇವಗಿರಿಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಫೆ.24ರಂದು ಮೃತರ ನಿವಾಸದಲ್ಲಿ ಜರಗಿತು.

ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನುಡಿನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಮಿಸ್ಟಿಕ್ ಕೌನ್ಸಿಲಿಂಗ್‌ನ ರಾಕೇಶ್ ಪಿ.ಶೆಟ್ಟಿ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿದ್ದರು.

ಮೃತರ ಪತ್ನಿ ಜಾನಕಿ, ಪುತ್ರ ಜೀವನ್, ಮಾಧವ, ಲೀಲಾವತಿ, ಸೀತಾ ಮುಳಿಮಜಲು, ರಾಧಾ ಬೂಡು, ರಮೇಶ, ಜಾನಕಿ ಮುಂಡಾಜೆ,ಮೃತರ ಸಹೋದರರಾದ ತಿಮ್ಮಪ್ಪ ಕುರುಂಜ ಮತ್ತು ನಾರಾಯಣ ಕುರುಂಜ ಸೇರಿದಂತೆ ಕುರುಂಜ ದೇವಗಿರಿ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here