ಅಯೋಧ್ಯೆ ರಾಮಂದಿರಕ್ಕೆ ಭೇಟಿ- ಉತ್ಸವದಲ್ಲಿ ಭಾಗಿ

0

ರಾಮಕುಂಜ: ರಾಮಕುಂಜ ಹಾಗೂ ಪುತ್ತೂರಿನ ತಂಡವೊಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀರಾಮ ಮಂದಿರಕ್ಕೆ ಫೆ.27ರಂದು ಭೇಟಿ ನೀಡಿ ಉತ್ಸವದಲ್ಲಿ ಪಾಲ್ಗೊಂಡರು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಅವರ ಪತ್ನಿ ಪುಷ್ಪಾ ಎಸ್.ರೈ, ಮೊಮ್ಮಗ ಸಮೃದ್ಧ್ ರೈ, ಎಸ್‌ಎಲ್‌ವಿ ಬುಕ್‌ನ ದಿವಾಕರ ದಾಸ್, ಹೇಮಾವತಿ ದಾಸ್ ಪಿ., ರಘುರಾಮ ದಾಸ್, ಯಶೋಧ ದಾಸ್, ಪುತ್ತೂರಿನ ಸಚ್ಚಿದಾನಂದ ದೇವಪ್ಪ, ನಂದನ ಸಚ್ಚಿದಾನಂದ ಬಂಗೇರ, ಲವಣ್ ಸಚ್ಚಿದಾನಂದ ಬಂಗೇರ, ರಾಮಕುಂಜದ ಆದಿತ್ಯ ಇರ್ಕಿ, ಸ್ಪೂರ್ತಿ ವಿ ಬಳ್ಳಾಲ್, ಅಪೂರ್ವ ಎಮ್., ಅಂಕಿತ್ ಇ., ಭರತ್‌ಕುಮಾರ್, ಕಟೀಲಿನ ವೆಂಕಟರಮಣ ಅಸ್ರಣ್ಣ, ವಿಜಯಲಕ್ಷ್ಮೀ ಅಸ್ರಣ್ಣ ಸಹಿತ ಸುಮಾರು 17 ಮಂದಿಯ ತಂಡ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಸಹಿತ ಆಯ್ದ ಗಣ್ಯರನ್ನು ವಿಶೇಷವಾಗಿ ಗೌರವಿಸಿದರು.

LEAVE A REPLY

Please enter your comment!
Please enter your name here