ಕುಂಬ್ರ ವರ್ತಕರ ಸಂಘದ ಮನವಿಗೆ ಸ್ಪಂದನೆ, ಹೈಮಾಸ್ಟ್ ಲೈಟ್ ದುರಸ್ತಿ

0

ಪುತ್ತೂರು: ಒಳಮೊಗ್ರು ಗ್ರಾ.ಪಂ ವ್ಯಾಪ್ತಿಯ ಕುಂಬ್ರ ಜಂಕ್ಷನ್‌ನಲ್ಲಿರುವ ಹೈಮಾಸ್ಟ್ ಲೈಟ್ ಸಹಿತ ಕೆಲವು ದಾರಿ ದೀಪಗಳು ಉರಿಯದೇ ಇದ್ದುದರಿಂದ ರಿಕ್ಷಾ ನಿಲ್ದಾಣದ ಸುತ್ತಮುತ್ತ ಇರುವ ಅಂಗಡಿಮುಂಗಟ್ಟುಗಳಿಗೆ ತೊಂದರೆಯಾಗುತ್ತದೆ, ಲೈಟ್‌ಗಳನ್ನು ಶೀಘ್ರ ದುರಸ್ತಿ ಮಾಡಿಕೊಡಬೇಕು ಎಂದು ಕುಂಬ್ರ ವರ್ತಕರ ಸಂಘದ ವತಿಯಿಂದ ಒಳಮೊಗ್ರು ಗ್ರಾಪಂಗೆ ಮನವಿ ಮಾಡಿಕೊಳ್ಳಲಾಗಿತ್ತು. ಇದಲ್ಲದೆ ಲೈಟ್ ದುರಸ್ತಿ ಮಾಡಿಕೊಡಿ ಎಂದು ಕುಂಬ್ರ ರಿಕ್ಷಾ ಚಾಲಕ ಮಾಲಕರು ಕೂಡ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಇದೀಗ ರಿಕ್ಷಾ ನಿಲ್ದಾಣದ ಬಳಿ ಹೈಮಾಸ್ಟ್ ವಿದ್ಯುತ್ ಲೈಟ್ ಅಳವಡಿಸಿದೆ ಅಲ್ಲದೆ ಸುತ್ತಮುತ್ತ ಕೂಡ ದಾರಿದೀಪಗಳನ್ನು ದುರಸ್ತಿ ಪಡಿಸಿದೆ. ಗ್ರಾ.ಪಂನ ಕಾರ್ಯಕ್ಕೆ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ ಹಾಗೂ ಪದಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here