ನೆಲ್ಯಾಡಿ: ಐಕಾನ್ ಕಂಪ್ಯೂಟರ್‍ಸ್ ಸ್ಥಳಾಂತರಗೊಂಡು ಶುಭಾರಂಭ

0

ನೆಲ್ಯಾಡಿ: ಇಲ್ಲಿನ ಥಾಮ್ಸನ್ ಕಾಂಪ್ಲೆಕ್ಸ್‌ನಲ್ಲಿ ಕಳೆದ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಐಕಾನ್ ಕಂಪ್ಯೂಟರ್‍ಸ್ ನೆಲ್ಯಾಡಿ ಮುಖ್ಯರಸ್ತೆಯಲ್ಲಿರುವ ಪುತ್ತನ್ ಪರಂಬಿಲ್ ಆರ್ಕೆಡ್‌ಗೆ ಸ್ಥಳಾಂತಾರಗೊಂಡು ಶುಭಾರಂಭಗೊಂಡಿತು.

ನೆಲ್ಯಾಡಿ ಸಂತ ಅಲ್ಫೋನ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಶಾಜಿಯವರು ಉದ್ಘಾಟಿಸಿ ಪ್ರಾರ್ಥನೆ ನೆರವೇರಿಸಿ ಆಶೀರ್ವದಿಸಿದರು. ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ.ಜೈಸನ್ ಸೈಮನ್‌ರವರು ಮಾತನಾಡಿ, ಉತ್ತಮ ಸೇವೆ ನೀಡುತ್ತಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳಗಲಿ ಎಂದು ನಾನು ದೇವರಲ್ಲಿ ಬೇಡುತ್ತೇನೆ ಎಂದು ಹೇಳಿ ಶುಭ ಹಾರೈಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ರೆ.ಫಾ.ಶಾಜಿ, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಬ್ರಹಾಂ ವರ್ಗಿಸ್, ಸಂಸ್ಥೆಯ ಮಾಲಕ ಜೋಸೆಫ್ ಶರೂನ್‌ರವರ ಮಾತೃಶ್ರೀ ಕ್ಲೇಮೆಂಟಿನಾ ಡಿಸಿಲ್ವಾ, ಗ್ರೆಸ್ಸಿ ಸೇವಿಯರ್, ಸೇವಿಯರ್ ರವರು ದೀಪ ಬೆಳಗಿದರು. ನಂತರ ಸಂಸ್ಥೆಯ ಪ್ರಥಮ ಗ್ರಾಹಕರ ಅಂಕಿತ ಕೆ.ವಿ. ಆರ್ಲರವರಿಗೆ ಲೆನೋವ ಲ್ಯಾಪ್‌ಟಾಪ್ ಹಸ್ತಾಂತರಿಸಲಾಯಿತು.

ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಾಜಾಲ್, ಜಿ.ಪಂ. ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷೆ ಸುಚಿತ್ರ ಬಂಟ್ರಿಯಾಲ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು.

ನೊರಾ ಜೋಸೆಫ್ ಪ್ರಾರ್ಥಿಸಿದರು. ಐಕಾನ್ ಕಂಪ್ಯೂಟರ್‍ಸ್ ಮಾಲೀಕ ಜೋಸೆಫ್ ಶರೂನ್‌ರವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ 11 ವರ್ಷಗಳಿಂದ ಗ್ರಾಹಕರು ನೀಡಿದ ಸಹಕಾರಕ್ಕೆ ಚಿರ ಋಣಿಯಾಗಿದ್ದೇವೆ. ಮುಂದೆಯೂ ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿ ಪ್ರೋತ್ಸಾಹಿಸಬೇಕು. ಗುಣಮಟ್ಟದ ಸೇವೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಜಿನ್ಸಿ ಶರೂನ್ ವಂದಿಸಿದರು. ಸುಧೀರ್‌ಕುಮಾರ್ ಕೆ.ಎಸ್ ನಿರೂಪಿಸಿದರು.

LEAVE A REPLY

Please enter your comment!
Please enter your name here