ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಕಡಬ ಪ್ರಖಂಡ ವಿ.ಹಿಂ.ಪ ಖಂಡನೆ

0

ಕಡಬ: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿಯನ್ನು ಖಂಡಿಸಿರುವ ಕಡಬ ವಿಶ್ವ ಹಿಂದೂ ಪರಿಷದ್ ಆ್ಯಸಿಡ್ ಎರಚಿರುವ ಯುವಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಎಳೆ ವಯಸ್ಸಿನಲ್ಲಿ ಇಂತಹ ವಿಕೃತ ಮನೋಭಾವನೆ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ, ವಿದ್ಯಾರ್ಥಿಗಳು ಮತ್ತು ಯುವತಿಯರು ಪ್ರೀತಿ ಪ್ರೇಮದ ಬಲೆಗೆ ಬೀಳಬಾರದು, ಯಾರೆ ಹೆಣ್ಮಕ್ಕಳು ತೊಂದರೆಗೆ ಒಳಗಾದಾಗ ಪೋಷಕರ ಗಮನಕ್ಕೆ ತರಬೇಕು ಎಂದಿರುವ ಸಂಘಟನೆಯ ಪ್ರಮುಖರು, ಆರೋಪಿ ಯುವಕನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಈತನಿಗೆ ಸಹಕಾರ ಯಾರಾದರೂ ಮಾಡಿದ್ದಾರೆಯೆ ಎಂಬ ತನಿಖೆ ಮಾಡಬೇಕು ಎಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here