ಮಾ.7: ದರ್ಬೆಯಲ್ಲಿ ನಯಾ ಚಪ್ಪಲ್ ಬಜಾರ್ ನವೀಕೃತಗೊಂಡು ಶುಭಾರಂಭ

0

ಪುತ್ತೂರು: ಕಳೆದ 28 ವರ್ಷಗಳಿಂದ ವಿವಿಧ ಸುಪ್ರಸಿದ್ಧ ಕಂಪೆನಿಗಳ ಗುಣಮಟ್ಟದ ಪಾದರಕ್ಷೆ ಉದ್ಯಮವನ್ನು ನಡೆಸಿಕೊಂಡು ಉತ್ತಮ ಗ್ರಾಹಕ ಸ್ನೇಹಿ ಎನಿಸಿಕೊಂಡಿರುವ ನಯಾ ಚಪ್ಪಲ್ ಬಜಾರ್ ಇದೀಗ ನವೀಕೃತಗೊಂಡು ಹೊಸತನದ ರೂಪವನ್ನು ಕಂಡುಕೊಂಡು ಸಿದ್ಧವಾಗಿ ಗ್ರಾಹಕರ ಸೇವೆಗೆ ಸಿದ್ಧವಾಗಿ ಉದ್ಘಾಟನೆಗೊಳ್ಳುತ್ತಿದೆ.
ದರ್ಬೆ ಬುಶ್ರಾ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ಈ ಮಳಿಗೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರವರು ಉದ್ಘಾಟನೆಗೊಳಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಥಮ ಖರೀದುದಾರರಾಗಿ ಬುಶ್ರಾ ಟವರ್ಸ್ ಮಾಲಕ ಅಬ್ದುಲ್ ಅಝೀಜ್ ರವರು ಸಂಸ್ಥೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ವಾಮನ್ ಪೈ, ಪುತ್ತೂರು ಸಂಯುಕ್ತ ಜಮಾಅತ್ ಸಮಿತಿ ಅಧ್ಯಕ್ಷ ಹಾಗೂ ಕಲ್ಲೇಗ ಜುಮಾ ಮಸ್ಜಿದ್ ಅಧ್ಯಕ್ಷ ಮೊಹಮದ್ ಹಾಜಿ ಕೆ.ಪಿ, ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ನ ಡಾ.ಅಶೋಕ್ ಪಡಿವಾಳ್, ಪುತ್ತೂರು-ದರ್ಬೆ ಬಿ.ಒ.ಬಿ ಚೀಫ್ ಮ್ಯಾನೇಜರ್ ಸಾದಿಕ್ ಎಸ್.ಎಂ, ಜಿಲ್ಲೆ 317ಡಿ ಇದರ ಲಿಯೋ ಅಧ್ಯಕ್ಷೆ ಹಾಗೂ 2023-24ರ ಲಿಯೋ/ಲಯನ್ ಕ್ಯಾಬಿನೆಟ್ ಸದಸ್ಯೆ ಡಾ.ರಂಜಿತಾ ಎಚ್.ಶೆಟ್ಟಿ, ಎಪಿಎಂಸಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್, ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯ ಡಾ.ಜಸ್ಪ್ರೀತ್ ಸಿಂಗ್ ದಿಲ್, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ, ಪುತ್ತೂರು ಸಿಝ್ಲರ್, ಅಗ್ರಿಝೋನ್ ಸಂಸ್ಥೆಯು ಮುಖ್ಯಸ್ಥ ಪಿ.ಎನ್ ಪ್ರಸನ್ನ ಕುಮಾರ್ ಶೆಟ್ಟಿ, ಪುತ್ತೂರು ಮದರ್ ಇಂಡಿಯಾ ಮಾಲಕ ಎಂ.ಜಿ ರಝಾಕ್ ರವರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 9448123569, 8867981624, 8197847680 ನಂಬರಿಗೆ ಸಂಪರ್ಕಿಸಬಹುದು ಎಂದು ಗ್ರೂಪ್ ಆಫ್ ನಯಾ ಚಪ್ಪಲ್ ಬಜಾರ್ ಸಂಸ್ಥೆಯು ತಿಳಿಸಿದೆ.

ಗ್ರಾಹಕರಿಗೆ ಬಹುಮಾನಗಳ ಉಡುಗೊರೆ..
ಸಂಸ್ಥೆಯು ಕ್ವಿಜ್ ಹಮ್ಮಿಕೊಂಡಿದ್ದು ಅದಕ್ಕೆ ಉತ್ತರ ನೀಡಿ ಬಹುಮಾನ ಗೆಲ್ಲುವ ಅವಕಾಶದ ಜೊತೆಗೆ ರೂ.1000ಕ್ಕಿಂತ ಮೇಲ್ಪಟ್ಟ ಖರೀದಿಗೆ ಆಕರ್ಷಕ ಬಹುಮಾನ ಪಡೆಯುವ ಸದವಕಾಶ ಸಂಸ್ಥೆಯು ಒದಗಿಸಿಕೊಟ್ಟಿದ್ದು ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಬಹುಮಾನ ಗೆಲ್ಲುವಂತಾಗಲಿ ಎಂದು ನಯಾ ಚಪ್ಪಲ್ ಬಜಾರ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here