ಗ್ಯಾರಂಟಿ ಫಲಾನುಭವಿಗಳ ಸಮಾವೇಶ – 34 ನೆಕ್ಕಿಲಾಡಿಯಿಂದ 160ಕ್ಕೂ ಅಧಿಕ ಮಂದಿ ಭಾಗಿ

0

ಉಪ್ಪಿನಂಗಡಿ: ಪುತ್ತೂರಿನಲ್ಲಿ ನಡೆದ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶಕ್ಕೆ 34 ನೆಕ್ಕಿಲಾಡಿ ಗ್ರಾ.ಪಂ. ನಿಂದ ಸುಮಾರು 160ಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಿದ್ದರು.


ಇಲ್ಲಿಗೆ ಎರಡು ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪುತ್ತೂರು ಸಹಾಯಕ ಕಮಿಷನರ್ ಅವರ ಆದೇಶದಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಡಿ. ಬಂಗೇರ ಅವರ ನೇತೃತ್ವದಲ್ಲಿ ಎರಡು ಬಸ್‌ಗಳಲ್ಲಿ 132 ಫಲಾನುಭವಿಗಳು 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಿಂದ ಸಮಾವೇಶಕ್ಕೆ ತೆರಳಿದರಲ್ಲದೆ, ಸುಮಾರು 30ರಷ್ಟು ಫಲಾನುಭವಿಗಳು ನೇರವಾಗಿ ಪುತ್ತೂರಿನ ಸಮಾವೇಶ ಸ್ಥಳಕ್ಕೆ ಆಗಮಿಸಿದ್ದರು.

LEAVE A REPLY

Please enter your comment!
Please enter your name here