ತಿಂಗಳಾಡಿ ಟೆಲಿಕಾಂ ನಿವೃತ್ತ ಉದ್ಯೋಗಿ ನಾಮದೇವ ತಂಟೆಪ್ಪಾಡಿ ನಿಧನ

0

ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಕಜೆ ನಿವಾಸಿ ದಿ. ಅಚ್ಚುತ ಗೌಡರ ಪುತ್ರ ಟೆಲಿಕಾಂ ನಿವೃತ್ತ ಉದ್ಯೋಗಿ ನಾಮದೇವ ತಂಟೆಪ್ಪಾಡಿ (60ವ)ರವರು ಅನಾರೋಗ್ಯದಿಂದಾಗಿ ಮಾ.8ರಂದು ನಿಧನರಾದರು. ಮೃತರು ಪತ್ನಿ ಕುಸುಮ, ಪುತ್ರಿ ಸುಶ್ಮಿತಾ, ಪುತ್ರ ಸುಜಿತ್, ಸಹೋದರರಾದ ಕುಸುಮಾಧರ, ಪುರುಷೋತ್ತಮ, ಚಂದ್ರಶೇಖರ, ಸಹೋದರಿಯರಾದ ಲಲಿತ, ಚಂದ್ರಾವತಿ, ಪ್ರೇಮರವರನ್ನು ಅಗಲಿದ್ದಾರೆ. ಇವರು ತಿಂಗಳಾಡಿ ಶ್ರೀ ಕೃಷ್ಣ ಮಿತ್ರವೃಂದದ ಮಾಜಿ ಅಧ್ಯಕ್ಷರಾಗಿ, ತಿಂಗಳಾಡಿ ಶ್ರೀ ದೇವಗಿರಿ ಭಜನಾ ಮಂದಿರದ ಸಕ್ರೀಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಮೃತದೇಹವನ್ನು ಸುಳ್ಯ ತಾಲೂಕಿನ ತಂಟೆಪ್ಪಾಡಿಯಲ್ಲಿರುವ ಅವರ ಮೂಲ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

LEAVE A REPLY

Please enter your comment!
Please enter your name here