ಶ್ರೀ ರಾಮಗೋಪಾಲ ಕಾಂಪ್ಲೆಕ್ಸ್ ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್ ಬಳಿ ನೂತನವಾಗಿ ನಿರ್ಮಾಣವಾದ ಶ್ರೀ ರಾಮಗೋಪಾಲ ಕಾಂಪ್ಲೆಕ್ಸ್ ಮಾ.8ರ ಮಹಾಶಿವರಾತ್ರಿಯ ಶುಭದಿನದಂದು ಶುಭಾರಂಭಗೊಂಡಿತು. ಕಾಂಪ್ಲೆಕ್ಸ್ ಮಾಲಕರ ತಾಯಿ ಜಯಲಕ್ಷ್ಮೀ ರಾಮ ನಾಯಕ್ ದೀಪ ಬೆಳಗಿಸಿ, ಉದ್ಘಾಟಿಸಿದರು. ಬೆಳಗ್ಗೆ ಪುರೋಹಿತರಾದ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಶ್ರೀ ಗಣಪತಿ ಹೋಮ, ಶ್ರೀ ಲಕ್ಷ್ಮೀ ಪೂಜೆ ನೆರವೇರಿತು.

ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಕರುಣಾಕರ ಸುವರ್ಣ, ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಮಾಜಿ ಟ್ರಸ್ಟಿ ಉಪೇಂದ್ರ ಪೈ, ಪ್ರಮುಖರಾದ ಮೋಹನ್ ಕಿಣಿ, ಸುಧಾಕರ ಶೆಟ್ಟಿ ಕೋಟೆ, ಶ್ರೀನಿವಾಸ ಪೈ, ರವಿಕಿರಣ್ ಕೊಯಿಲ, ಮಾಲಕರ ಪತ್ನಿ ಅನುಪಮಾ ನಾಯಕ್, ಮಕ್ಕಳಾದ ಚೇತನ್ ನಾಯಕ್, ರತನ್ ನಾಯಕ್, ಸೊಸೆ ವರ್ಷಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here