ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಆರ್ಯಾಪು ಗ್ರಾಮದ ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಎ.17ರ ಶ್ರಿರಾಮ ನವಮಿಯಂದು ನಡೆಯಲಿರುವ ಮಂದಿರದ 19ನೇ ವಾರ್ಷಿಕೋತ್ಸವ, ಅರ್ಧಏಕಾಹ ಭಜನೆ, ಸಾಮೂಹಿಕ ಶ್ರೀರಾಮ ಕಲ್ಪೋಕ್ತಪೂಜೆ ಹಾಗೂ ರಂಗಪೂಜೆಯ ಆಮಂತ್ರಣ ಪತ್ರಿಕೆಯು ಮಾ.7ರಂದು ಬಿಡುಗಡೆಗೊಂಡಿತು.


ಮಂದಿರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ಭಜನಾ ಮಂದಿರದ ಗೌರವಾಧ್ಯಕ್ಷ ಬಿ.ವಿ ಗೋಪಾಲಕೃಷ್ಣ ಭಟ್, ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ, ಕಾರ್ಯದರ್ಶಿ ಕಿಟ್ಟಣ್ಣ ರೈ, ಸದಸ್ಯರಾದ ಅಭಿಲಾಷ್ ರೈ, ವಿನೋದ್ ಪೂಜಾರಿ, ರಾಜೇಶ್ ಗೌಡ, ರಾಮ ನಾಯ್ಕ, ಭರತ್, ಉದಯ ನಾಯ್ಕ, ತಾರಾ ವಿ.ರೈ, ಜಯಲಕ್ಷ್ಮೀ ಗೌಡ, ರಮೇಶ ನಾಯ್ಕ, ದೀಪಕ್, ವಾಸಪ್ಪ ನಾಯ್ಕ, ಕೀರ್ತಿ, ಹೇಮಲತಾ, ಚಂಚಲಾಕ್ಷಿ, ಮೋಕ್ಷಿತ್, ನಿಶಾಂತ್, ಶ್ರೀರಾಮ ಸೇವಾ ಸಮಿತಿ, ಶ್ರೀರಾಮ ಭಜನಾ ಮಂಡಳಿ, ಶ್ರೀಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here