ಮುಂಡೂರು:ಬದಿಯಡ್ಕ ಸ್ವಾಮಿ ಕೊರಗಜ್ಜ ದೈವಸ್ಥಾನದ ಪುನಃಪ್ರತಿಷ್ಠೆ, ನೇಮೋತ್ಸವದ ಆಮಂತ್ರಣ ಬಿಡುಗಡೆ

0

ಪುತ್ತೂರು: ಮುಂಡೂರು ಗ್ರಾಮದ ಬದಿಯಡ್ಕ ಸ್ವಾಮಿ ಕೊರಗಜ್ಜ ಸೇವಾ ಸನ್ನಿಧಿಯಲ್ಲಿ ಮಾ.30ರಂದು ನಡೆಯಲಿರುವ ಕೊರಗ ತನಿಯ ದೈವದ ಪುನಃಪ್ರತಿಷ್ಠಾ ಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯು ಮಾ.11ರಂದು ಬಿಡುಗಡೆಗೊಂಡಿತು.


ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆಯು ಬಿಡುಗಡೆಗೊಂಡಿತು. ದೈವಸ್ಥಾನದ ಸಮಿತಿ ಗೌರವ ಸಲಹೆಗಾರರಾದ ಮೋಹನ ರೈ ನರಿಮೊಗರು. ವಾಸುದೇವ ಸಾಲಿಯಾನ್, ರಮೇಶ್ ಗೌಡ ಪಜಿಮಣ್ಣ, ಗಣೇಶ್ ಸಾಲಿಯಾನ್, ಧನಂಜಯ ಕುಲಾಲ್, ಅದ್ಯಕ್ಷ ರಮೇಶ್ ಆರ್.ಸಿ, ಅರ್ಚಕ ವಿನೋದ್, ಉಪಾಧ್ಯಕ್ಷ ಕೂಸಪ್ಪ, ಕಾರ್ಯದರ್ಶಿ ಶ್ರುತಿ, ಜತೆ ಕಾರ್ಯದರ್ಶಿ ಯಶೋಧ, ಕೋಶಾಧಿಕಾರಿ ಪ್ರವೀಣ, ಸದಸ್ಯರಾದ ಹರೀಶ್, ರಮೇಶ್, ಕೃಷ್ಣ, ಬಾಬು ಶೇಖಮಲೆ, ಸತೀಶ್, ನವೀನ್, ಜಗದೀಶ್, ಚಂದ್ರಾವತಿ, ಪ್ರೇಮ, ರೋಹಿಣಿ, ಸುಮಿತ್ರ, ರೇಖಾ ಹಾಗೂ ಮಾಲತಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here