ನಟಿ ಮಾಲಾಶ್ರೀ ಕುಟುಂಬ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ

0

ಕಾಣಿಯೂರು : ಕಾಟೇರ ಯಶಸ್ಸಿನ ಬೆನ್ನಲ್ಲೇ ನಟಿ ಮಾಲಾಶ್ರೀ ಅವರು ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಗಳು ಆರಾಧನಾ ಅವರ ಕಾಟೇರ ಸಿನಿಮಾ ಭರ್ಜರಿ ಪ್ರದರ್ಶನ ಕಂಡು ಯಶಸ್ಸು ಪಡೆದಿದೆ. ಇದೇ ಖುಷಿಯಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ, ಮಗ ಆರ್ಯನ್ ಜೊತೆ ದೇಗುಲಕ್ಕೆ, ಬಳಿಕ ಸಂಪುಟ ನರಸಿಂಹ ಸ್ವಾಮಿ ಭೇಟಿ ಕೊಟ್ಟಿದ್ದಾರೆ. ಮಠಕ್ಕೆ ಆಗಮಿಸಿದ್ದ ಮಾಲಾಶ್ರೀ ಕುಟುಂಬವನ್ನು ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಶಾಲು ಹೊದಿಸಿ ಆಶೀರ್ವದಿಸಿದರು.

LEAVE A REPLY

Please enter your comment!
Please enter your name here